April 26, 2024

Bhavana Tv

Its Your Channel

ಮಾಜಿ ಶಾಸಕರಾದ ಶ್ರೀ ವಿಜಯಾನಂದ ಎಸ್ ಕಾಶಪ್ಪನವರ ನೇತೃತ್ವದಲ್ಲಿ ಐಸೋಲೇಷನ್ ಕಿಟ್ ಜೊತೆಗೆ ಉಪಹಾರ.

ಇಳಕಲ್  :  ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾದ ಶ್ರೀ ವಿಜಯಾನಂದ ಎಸ್ ಕಾಶಪ್ಪನವರ ನೇತೃತ್ವದಲ್ಲಿ  ಹುನಗುಂದ ಸರಕಾರಿ  ಆಸ್ಪತ್ರೆಯ ಸಿಬ್ಬಂದಿಗಳಿಗೆ ,ಪೋಲಿಸ್ ಸಿಬ್ಬಂದಿಗಳಿಗೆ ,ಹಾಗೂ ಪುರಸಭೆ ಸಿಬ್ಬಂದಿ  ಮತ್ತು ಪೌರಕಾರ್ಮಿಕರಿಗೆ ಕೋವಿಡ್_೧೯ ಐಸೋಲೇಷನ್ ಕಿಟ್ ಜೊತೆಗೆ  ಉಪಹಾರ ನೀಡಿದರು .
ಮಹಾಮಾರಿ ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ತಮ್ಮ ಜೀವನವನ್ನೇ ಲೆಕ್ಕಿಸದೆ  ಹಗಲಿರುಳು ಶ್ರಮಿಸುತ್ತಿರುವ ಫ್ರೆಂಟ್ ಲೈನ್ ವಾರಿಯರ್ಸ್ ಗಳಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಮ್ಮಿನೇ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುನಗುಂದ ಪುರಸಭೆ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಸದಸ್ಯರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ವರದಿ : ವಿನೋದ ಬಾರಿಗಿಡದ

error: