ಸಾವಳಗಿ: ಜಮಖಂಡಿ ತಾಲ್ಲೂಕಿನ ಕೃಷ್ಣಾ ನದಿಯ ಪ್ರವಾಹದಿಂದ ಜಂಬಗಿ ಕೆ ಡಿ, ತುಬಚಿ, ಶೂರ್ಪಾಲಿ, ಟಕ್ಕಳಕಿ, ಟಕ್ಕೂಡ ಸೇರಿದಂತೆ ಜಮಖಂಡಿ ಮತ್ತು ಸಾವಳಗಿ ಮಾರ್ಗ ಮಧ್ಯದಲ್ಲಿ ಟಕ್ಕೂಡ ಕ್ರಾಸ ಹತ್ತಿರ ನೀರು ಸಂಪೂರ್ಣವಾಗಿ ರಸ್ತೆ ಮೇಲೆ ಹರಿಯುತ್ತಿದೆ.
ಜಂಬಗಿ ಮತ್ತು ಜಮಖಂಡಿ ಮಾರ್ಗ ಸಂಪೂರ್ಣವಾಗಿ ಬಂದ ಮಾಡಿ ಸಾವಳಗಿ ಪೋಲಿಸ ಠಾಣೆಯಿಂದ ಬ್ಯಾರಿಕೇಡ ಹಾಕಿ ಬಂದೋಬಸ್ತಮಾಡಿದ್ದಾರೆ.
ನಡುಗಡ್ಡೆಯಂತಾದ ಜಂಬಗಿ ಕೆ ಡಿ ಗ್ರಾಮದ ಜನರು ಇನ್ನು ಅಲ್ಲೆ ಇದ್ದು ತಮ್ಮ ದನ-ಕರುಗಳನ್ನು ಮಾತ್ರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಇದರ ಬಗ್ಗೆ ಗ್ರಾಮಸ್ಥರನ್ನು ಕೇಳಿದಾಗ ಕಡಿಮೆ ಆಗುವ ನಂಬಿಕೆಯಿAದ ಇದ್ದಿವಿ ನಾವು ಹೇಂಗಾದ್ರು ಎಲ್ಲಾದ್ರು ಹೋಗಬಹುದು ನಮ್ಮ ದನ ಕರುಗಳು ಎಲ್ಲಿ ಹೋಗಬೇಕು ಅವುಗಳಿಗೆ ಆಹಾರ ಎನು ಹಾಕಬೇಕು ಅಂತ ಬಾವುಕರಾದರು.
ಟಕ್ಕಳಕಿ ಗ್ರಾಮದಲ್ಲಿ ೨೧ ಕ್ಕಿಂತ ಹೆಚ್ಚು ಮನೆಗಳು ಜಲಾವೃತ ಅವರು ಪರ್ಯಾಯ ಅವರ ಸಂಭAದಿಕರ ಮನೆಗಳಲ್ಲಿ ಇದ್ದಾರೆ. ಮೂರನಾಲ್ಕು ಕುಟುಂಬಗಳು ಸರ್ಕಾರಿ ಶಾಲೆಯಲ್ಲಿ ಇರಲು ಅನುವು ಮಾಡಿಕೂಟ್ಟಿದ್ದೇವೆ ಎಂದು ನೂಡಲ್ ಅಧಿಕಾರಿ ನ್ಯಾಮಗೌಡ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ
ವರದಿ ಕಿರಣ ಸೂರಗೂಂಡ ಸಾವಳಗಿ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ