March 29, 2024

Bhavana Tv

Its Your Channel

ಶ್ರೀಮಠದಿಂದ ಖಾಸ್ಗತೇಶ್ವರ ಭವ್ಯ ಮೆರವಣಿಗೆ

ತಾಳಿಕೋಟೆ:- ಖಾಸ್ಗತೇಶ್ವರ ಭವ್ಯ ಮೆರವಣಿಗೆ 9:00 ಗಂಟೆಗೆ ಶ್ರೀಮಠದಿಂದ ಭವ್ಯ ಮೆರವಣಿಗೆ ಆನೆ ಅಂಬಾರಿ ಸಹಿತ ಹೊರಡಲಾಯಿತು ಈ ಭವ್ಯ ಮೆರವಣಿಗೆ ರಾಜವಾಡೆ ಮೂಲಕ ಗಂಗ ಸ್ಥಳಕ್ಕೆ ಹೋಗಿ ಅಲ್ಲಿಂದ ನಾಗರ ಕಲ್ಲೊಣ, ಶಿವಾಜಿ ಚೌಕ್, ಗಜಾನನ ಎಂಪೋರಿಯA, ಕತ್ರಿ ಬಜಾರ್ ಮುಖಾಂತರ ಹಾದು ಮಠಕ್ಕೆ ಬರಲಾಯಿತು ಹೆಜ್ಜೆಹೆಜ್ಜೆಗೂ ಭಕ್ತರಿಂದ ಮಹಾಪ್ರಸಾದ ಏರ್ಪಾಟು ಮಾಡಲಾಗಿತ್ತು.

ವಿವಿಧ ಕಲಾತಂಡಗಳು ಭವ್ಯ ಮೆರವಣಿಗೆಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದವು ಆನೆಯ ಮೇಲೆ ಶ್ರೀಗುರು ಖಾಸ್ಗತೇಶ ನ ಭವ್ಯ ಮೂರ್ತಿಯನ್ನು ವಿರಾಜಮಾನ ಮಾಡಲಾಗಿತ್ತು ರಥದಲ್ಲಿ ಶ್ರೀಗುರು ವೀರೇಶ್ವರರ ಭಾವಚಿತ್ರ ಪೀಠಾಧಿಪತಿಗಳಾದ ಸಿದ್ದಲಿಂಗದೇವರು ಆಸೀನರಿದ್ದರು ಈ ಭವ್ಯ ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು ಇಡೀ ತಾಳಿಕೋಟೆ ಇವತ್ತು ಖಾಸ್ಗತ ಖಾಸ್ಗತ ಎಂದು ಉದ್ಘೋಷ ಮೊಳಗಿತು.

ವರದಿ: ಅಮೋಘ ತಾಳಿಕೋಟೆ

error: