April 25, 2024

Bhavana Tv

Its Your Channel

ಕೂಡಲಸಂಗಮದಲ್ಲಿ 75 ನೇ ಸ್ವಾತಂತ್ರ‍್ಯ ದಿನಾಚರಣೆ

ಬಾಗಲಕೋಟ ಜಿಲ್ಲೆಯ ಕೂಡಲಸಂಗಮದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವ ಹಾಗೂ ಆಜಾದ್ ಅಮೃತ ಮಹೋತ್ಸವ ಕಾರ್ಯಕ್ರಮ ಶ್ರೀ ಸಂಗಮೇಶ್ವರ ಪ್ರೌಢಶಾಲೆ ಪದವಿ ಪೂರ್ವ ಮಹಾವಿದ್ಯಾಲಯ ಕೂಡಲಸಂಗಮದ ಜರುಗಿತ್ತು

ಕಾರ್ಯಕ್ರಮವನ್ನು ಹಿರಿಯ ಶಿಕ್ಷಕರಾದ ಮುತ್ತಲಗೇರಿ ಅವರಿಂದ ಧ್ವಜಾ ರೋಹಣ ನೆರವೇರಿಸಿ ಶ್ರೀಯುತರು ಧ್ವಜಾರೋಹಣ ಪರ ಭಾಷಣ ಮಾಡಿದರು . ನಂತರ ಮಾಜಿ ಸೈನಿಕರು ಮೈಬೂಬ್ ಅತ್ತಾರ ಹಾಗೂ ಸೈನಿಕ ಸೇವೆಯಲ್ಲಿರುವ ಪ್ರಭುಕುಮಾರ ಬೂದುರಿ ಹಾಗೂ ಸೈನ್ಯದಲ್ಲಿ ವೀರ ಮರಣ ಹೊಂದಿದ ಮಹಾಂತೇಶ್ ಚೌಧರಿ ಅವರ ಧರ್ಮಪತ್ನಿಯಾದ ಶಿಲ್ಪಾ ಚೌಧುರಿ ಅವರನ್ನು ಸನ್ಮಾಸಿಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಶೇಖರಪ ದೇಸಾಯಿ ಹಾಗೂ ನಾಗರಾಜ್ ಗೌಡರ್ ಮತ್ತು ಪಂಚಾಯಿತಿಯ ಸದಸ್ಯರಾದ ಮಲ್ಲಪ್ಪ ಚೌಧರಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಭಾಷಣ ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡಿದರು
ಮಹಾವಿದ್ಯಾಲಯದ ಪ್ರಭಾರ ಪ್ರಾಚಾರ್ಯರಾದ ಬೂದೇಶ್ವರ ಎಸ್ ಎಸ್, ಬಿ ಕೆ ಹಿರೇಮಠ್, ಹೆಚ್ ಬಿ ವನಕಿ, ಎಸ್ ಆರ್ ಹಲಗಣಿ ಮತ್ತು ಪ್ರೌಢಶಾಲೆಯ ಶಿಕ್ಷಕರಾದ ಪಟ್ಟಣಶೆಟ್ಟಿ ಕುಲಕರ್ಣಿ ಮುರನಾಳ ಬಿರಾದಾರ, ಶಿಕ್ಷಕಿಯರಾದ ಶೀಲವಂತ ಬೋನೂರ, ಹಚ್ಚೊಳ್ಳಿ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.

ಈ ಕಾರ್ಯಕ್ರಮವನ್ನು ಬಿ ಎಸ್ ಸಿದರಡ್ಡಿ ಉಪನ್ಯಾಸಕರು ಹಾಗೂ ರವಿ ಲಮಾಣಿ ದೈಹಿಕ ಶಿಕ್ಷಕರು ಕಾರ್ಯಕ್ರಮ ನಿರೂಪಿದರು ಪ್ರೌಢ ಶಾಲೆ ಮತ್ತು ಮಹಾವಿದ್ಯಾಲಯ ಬೋಧಕೇತರ ಸಿಬ್ಬಂದಿಯವರು ಹಾಜರಿದ್ದರು.

ವರದಿ ನಿಂಗಪ್ಪ ಕಡ್ಲಿಮಟ್ಟಿ

error: