April 25, 2024

Bhavana Tv

Its Your Channel

ತಾಳಿಕೋಟೆಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೆಂಕಟೇಶ್ವರ ಪುರಾಣ ಮಂಗಲೋತ್ಸವ ಕಾರ್ಯಕ್ರಮ

ತಾಳಿಕೋಟಿ ನಗರದ ಬ್ರಾಹ್ಮಣ ಸಮಾಜದ ಶ್ರೀ ವೆಂಕಟೇಶ್ವರ ಮಂದಿರದಲ್ಲಿ ನವರಾತ್ರಿಯ ಮೊದಲನೇ ದಿನದಿಂದ ವಿಜಯದಶಮಿ ವರೆಗೂ ಶ್ರೀ ವೆಂಕಟೇಶ್ವರ ಪುರಾಣವನ್ನು ಹಮ್ಮಿಕೊಳ್ಳಲಾಗಿತ್ತು
ಪ್ರತಿದಿನ ಸಾಯಂಕಾಲ 5:00 ರಿಂದ 6:00 ಗಂಟೆಯವರೆಗೆ ಶ್ರೀ ಶ್ರೀಧರ ಜೋಶಿ ಇವರ ನೇತೃತ್ವದಲ್ಲಿ ಪುರಾಣ ನಡೆಯುತ್ತಿತ್ತು
ನಂತರ ವಿಜಯದಶಮಿಯಂದು ಪುರಾಣ ಮಂಗಲೋತ್ಸವ ಕಾರ್ಯಕ್ರಮ ಹಾಗೂ ಭಜನಾ ಕಾರ್ಯಕ್ರಮ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ನೆರವೇರಿದವು
ಈ ಸಂದರ್ಭದಲ್ಲಿ ಅರ್ಚಕರು ರಾಘವೇಂದ್ರ ಆಚಾರ್ಯ ಕಟ್ಟಿ, ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಗುರದತ್ತ ಚಪೇಟ್ಲಾ,
ದಿನಕರ್ ಜೋಶಿ, ಶ್ರೀಧರ್ ಗ್ರಾಮ ಪುರೋಹಿತ , ಅನುಶ್ರೀ ಕುಲಕರ್ಣಿ, ಮಾಯಾಕ್ಕ ಕಟ್ಟಿ , ಹಾಗೂ ಮತ್ತಿತರ ಮಹಿಳೆಯರು ಉಪಸ್ಥಿತರಿದ್ದರು

ವರದಿ: ಅಮೋಘ ತಾಳಿಕೋಟೆ

error: