April 25, 2024

Bhavana Tv

Its Your Channel

ಕರ್ನಾಟಕದ ಸಮಗ್ರ ಅಭಿವೃದ್ಧಿಯೆ ಬಿಜೆಪಿ ಗುರಿ: ಬಿ ಎಸ್ ಯಡಿಯೂರಪ್ಪ

   ಬಾಗಲಕೋಟೆ:  ರಾಜ್ಯದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿರುವ ಬಿಜೆಪಿ ಪಕ್ಷ ರಾಜ್ಯವನ್ನ ಅಭಿವೃದ್ಧಿ ಪಥದತ್ತ ಕೊಂಡುಯ್ಯವ ಗುರಿ ಇಟ್ಟುಕೊಂಡು ಚುನಾವಣೆಗೆ ಇಳಿದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಹೇಳಿದರು.

ಹುನಗುಂದ ಮತಕ್ಷೇತ್ರದ ಇಳಕಲದಲ್ಲಿ ರೋಡ್ ಶೋ ನಂತರ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿ, ಬಡ ರೈತ ಮಹಿಳೆಯರಿಗೆ ಪ್ರತಿ ತಿಂಗಳು 1 ಸಾವಿರ ರೂಪಾಯಿ, ಮುಂಗಾರಿನಲ್ಲಿ ಭಿತ್ತನೆಗೆ ರೈತರಿಗೆ10 ಸಾವಿರ ರೂ, ಎಸ್ಸಿ.ಎಸ್ಟಿ ಮೀಸಲಾತಿಯನ್ನು 7% ಹೆಚ್ಚಿಸಿದ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಗೆಲ್ಲಿಸಿ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ.
ಹುನಗುಂದ ಕ್ಷೇತ್ರದಲ್ಲಿ ದೊಡ್ಡನಗೌಡ ಪಾಟೀಲ ಅವರನ್ನು ಬೆಂಬಲಿಸಿ ಎಂದು ವಿನಂತಿಸಿದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ಅಖಂಡ ವಿಜಯಪುರ ಜಿಲ್ಲೆಯಲ್ಲಿರುವ ರೈತರ ಕಲ್ಯಾಣಕ್ಕಾಗಿ 10 ಸಾವಿರ ಕೋಟಿ ಮಂಜೂರು ಮಾಡಿದ್ದು ಬಿಜೆಪಿ ಸರ್ಕಾರಕ್ಕೆ ನಿಮ್ಮ ಆರ್ಶಿವಾದ ಇರಲಿ ಎಂದರು.
ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ರೈತರ ಕಲ್ಯಾಣಕ್ಕಾಗಿ ಡಬಲ್ ಇಂಜನ್ ಸರ್ಕಾರ ಬದ್ದವಾಗಿದ್ದು, ಯಾವುದೇ ಸೋರಿಕೆಯಿಲ್ಲದೇ 10 ಸಾವಿರ ರೂಗಳನ್ನು ಪ್ರತಿ ವರ್ಷ ರೈತರಿಗೆ ನೀಡುತ್ತಿದೆ. ಮಹಿಳೆಯ ಕಲ್ಯಾಣ, ಹಿಂದುಳಿದ ವರ್ಗದವರ ಅಭಿವೃದ್ಧಿ ಕಾರ್ಯದಲ್ಲಿ ಮುನ್ನಡೆದಿರುವ ಬಿಜೆಪಿ ಪಕ್ಷಕ್ಕೆ ಹುನಗುಂದ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮತ್ತೊಮ್ಮೆ ಬಿಜೆಪಿಗೆ ಅವಕಾಶ ನೀಡಿ ಎಂದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ನೈತಿಕತೆ ಕಳೆದುಕೊಂಡ ವಿಜಯಾನಂದ ಕಾಶಪ್ಪನವರ ಅವರಿಗೆ ಮತಕೇಳುವ ನೈತಿಕತೆಯಿಲ್ಲ, ಅವರನ್ನು ಮತ್ತೊಮ್ಮೆ ಮಾಜಿ ಮಾಡಿ ಬಿಜೆಪಿಗೆ ಮತನೀಡಿ ಬಿಜೆಪಿ ಗೆಲ್ಲಿಸಿ. 2023 ಕ್ಕೆ ಬಿಜೆಪಿ ಸರ್ಕಾರ ರಚನೆ ಶತಸಿದ್ಧವಾಗಿದೆ ಎಂದರು.
ಸಚಿವ ಭೈರತಿ ಬಸವರಾಜ, ಸಂಸದ ಪಿಸಿ ಗದ್ದಿಗೌಡರ ಮಾತನಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಯಾತ್ರೆಯ ಸಂಚಾಲಕ ಅರುಣ ಶಾಹಾಪೂರ ಮಾಜಿ ಶಾಸಕ ಎಸ್.ಕೆ.ಬೆಳ್ಳುಬ್ಬಿ, ನಾರಾಯಣ ಬಾಂಡಗೆ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಇದ್ದರು.

ವರದಿ: ಮಹಾಂತೇಶ್ ಕುರಿ

error: