April 25, 2024

Bhavana Tv

Its Your Channel

ಇಲಕಲ್ಲ ಕೆ.ಇ.ಬಿ.ಯಲ್ಲಿ ಬೆಂಕಿ ಅವಘಡ ತಪ್ಪಿದ ದೊಡ್ಡ ದುರಂತ.

ಬಾಗಲಕೋಟೆ : ಜಿಲ್ಲೆಯ ಇಲಕಲ್ಲ ನಗರದ ಕೆ.ಇ.ಬಿ.ಮೇನ್ ಜಂಗಷನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಪಿ.ಟಿ(ಪೊಟೆಂಸಿಯಲ್ ಟಾನ್ಸಪಾರ್ಮರ),ಆಯಿಲ್ ಇದ್ದುದ್ದರಿಂದ ಬೆಂಕಿ ತಗುಲಿದ್ದು, . ದೊಡ್ಡ ಪ್ರಮಾಣ ಬ್ಲಾಸ್ಟ ಸೌಂಡ ಬಂದಿದ್ದರಿoದ ಜಾಗೃತರಾದ ಕೆ,ಇ,ಬಿ .ಸಿಬ್ಬಂದಿ ಅಗ್ನಿಶಾಮಕ ಠಾಣೆ ವಿಷಯ ತಿಳಿಸಿದ್ದು, ತಕ್ಷಣ ಜಾಗೃತರಾದ ಅಗ್ನಿಶಾಮಕ ಸಿಬ್ಬಂದಿ ಕೇವಲ ೬ ನಿಮಿಷ ದಲ್ಲಿ ಸ್ಥಳಕ್ಕೆ ಆಗಮಿಸಿದಾಗ ಪಿ.ಟಿ.ಗೆ ಹತ್ತಿ ಉರಿಯುತ್ತಿದ್ದ ಬೆಂಕಿ ನಂದಿಸಿ ಮುಂದೆ ಆಗಬಹುದಾದ ದೊಡ್ಡ ದುರಂತ ವನ್ನು ತಡೆಗಟ್ಟಲು ಯಶಸ್ವಿಯಾದರು. ಪಕ್ಕಕ್ಕೆ ಇದ್ದ ಇಡಿ ಇಲಕಲ್ಲ ನಗರಕ್ಕೆ ವಿದ್ಯುತ್ ಸರಬರಾಜು ಮಾಡು ಟಿಸಿ.ಇದ್ದಿದ್ದರಿಂದ ಇಲಕಲ್ಲ ನಗರದ ಜನರ ಪಾಲಿಗೆ ಆಗಬಹುದು ದೊಡ್ಡ ದುರಂತ ಒಂದು ತಪ್ಪಿದಂತಾಗಿದೆ .

ಎನ್.ಎ.ಮನ್ನಾನಾಯಕ ಮತ್ತು ಜಗದೀಶ.ಗಿರಡ್ಡಿಯವರ ನೇತೃತ್ವದಲ್ಲಿ . ಬೆಂಕಿ ನಂದಿಸುವ ಕಾರ್ಯಚರಣೆ ಪ್ರಾರಂಭಿಸಿ. ಸಿಬ್ಬಂದಿಯರಾದ ಮಮ್ಮದಯಾಸಿನ್, ಎ.ಎಂ.ಕoದಗಲ್ಲ್. ಸುರೇಶ,ಕಲಬುರ್ಗಿ. ಸಂತೋಷ, ಬೆಂಕಿ ನಂದಿಸಲು ಶ್ರಮಿಸಿದರು.

error: