March 25, 2024

Bhavana Tv

Its Your Channel

ಇಳಕಲ್ : ಭೂಮಿಕಾ ಮತ್ತು ವರುಣ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಇಳಕಲ್: ಮತದಾನದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಎಸ್ ವ್ಹಿ ಎಂ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ಹಂತದ ಇಳಕಲ್ ತಾಲೂಕು ಮಟ್ಟದ ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ಸ್ಪಂದನ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಾದ ಕು.ಭೂಮಿಕಾ ಸಜ್ಜನ ಪ್ರಥಮ ಸ್ಥಾನ ಹಾಗೂ ವರುಣ ಸಜ್ಜನ ದ್ವಿತೀಯ ಸ್ಥಾನ ಪಡೆದು ಇಬ್ಬರೂ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜಿನ ನಿರ್ದೇಶಕ ಪ್ರಾಚಾರ್ಯರಾದ ಅಮರೇಶ ಬಿ ಕೌದಿ ಹಾಗೂ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನೆಗಳನ್ನು ಕೋರಿದ್ದಾರೆ

ವರದಿ:ವಿನೋದ ಬಾರಿಗಿಡದ ಇಳಕಲ್

error: