April 23, 2024

Bhavana Tv

Its Your Channel

ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಗ್ರಾಮಪಂಚಾಯತಿಗಳ ಬಲವರ್ಧನೆ ಹಾಗೂ ವಿಕೇಂದ್ರೀಕರಣ ಕುರಿತಂತೆ ನಿರ್ಣಾಯಕ ಸಭೆ

ಬೆಂಗಳೂರು: ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ ಸಚಿವರಾದ ಕೆ ಎಸ್ ಈಶ್ವರಪ್ಪನವರ ನೇತೃತ್ವದಲ್ಲಿ ಜರುಗಿದ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಗ್ರಾಮಪಂಚಾಯತಿಗಳ ಬಲವರ್ಧನೆ ಹಾಗೂ ವಿಕೇಂದ್ರೀಕರಣ ಕುರಿತಂತೆ ನಿರ್ಣಾಯಕ ಸಭೆ ಜರುಗಿತು. ಸಮಿತಿಯ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ ರವರು , ತಜ್ಞ ಸಮಿತಿಯ ಸದಸ್ಯರಾದ ನಾರಾಯಣಸ್ವಾಮಿ , ಡಿ.ಆರ್ ಪಾಟೀಲ್, ಪಂಚಾಯತ್ ಪರಿಷತ ವಿ ವೈ ಘೋರ್ಪಡೆ , ಸತೀಶ ಕಾಡಳ್ಳಿ , ಕೃಷ್ಣ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಉಮಾ ಮಹದೇವನ , ಸಚಿವರ ವಿಶೇಷ ಕರ್ತವ್ಯ ಅಧಿಕಾರಿಗಳಾದ ಜಯರಾಮ ರವರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದರು .

ವರದಿ.. ವೇಣುಗೋಪಾಲ ಮದ್ಗುಣಿ.

error: