April 24, 2024

Bhavana Tv

Its Your Channel

ಜಿ.ಎಸ್.ಹೆಗಡೆಯವರ 70ನೇ ಹುಟ್ಟುಹಬ್ಬವನ್ನು ಆಚರಿಸಿದ ಉನ್ನತ ಶಿಕ್ಷಣ, ಕೌಶಲ್ಯಅಭಿವೃದ್ಧಿ ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ

ಬೆಂಗಳೂರು: ಸಪ್ತಕ ರುವಾರಿ ಜಿ.ಎಸ್.ಹೆಗಡೆಯವರ ಎಪ್ಪತ್ತನೇ ಜನ್ಮ ದಿನದ ಪ್ರಯುಕ್ತ ಮೂರು ದಶಕಗಳ ಕಾಲದಿಂದ ಆತ್ಮೀಯರಾದ, ಅವರ ಸಂಗೀತ ಕುಟುಂಬದ ಮೇಲೆ ಅಪಾರ ಅಭಿಮಾನ,ಪ್ರೀತಿ ಹಾಗೂ ಸಪ್ತಕ ಸಂಸ್ಥೆಯ ಪ್ರಾರಂಭದಿoದಲೂ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ ರಾಜ್ಯದ ಜನಪ್ರಿಯ , ಅತ್ಯುತ್ತಮ, ದಕ್ಷ , ಉನ್ನತ ಶಿಕ್ಷಣ, ಕೌಶಲ್ಯಅಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ತಮ್ಮ ಎಡಬಿಡದ ಕಾರ್ಯಕ್ರಮದ ನಡುವೆಯೂ, ನೆನಪಿಟ್ಟು, ಜಿ.ಎಸ್.ಹೆಗಡೆಯವರ ಮನೆಯ ಹತ್ತಿರ ಇರುವ ಉದ್ಯಾನವನದ ಗ್ಲಾಸ್ ಹೌಸಿಗೆ ಅವರನ್ನು ಕರೆಯಿಸಿ ಬುಧವಾರ ಕೇಕ್ ಕತ್ತರಿಸಿ , ಶಾಲು ಹೊದಿಸಿ, ಮೈಸೂರ್ ಪೇಟಾ ತೊಡಿಸಿ, ಹಾರ ಹಾಕಿ ಗೌರವಿಸಿದರು.


ನಂತರ ಅವರು ಮಾತನಾಡಿ ಜಿ.ಎಸ್.ಹೆಗಡೆಯವರ ಕುಟುಂಬದ ಬಗ್ಗೆ ಸಂಗೀತ, ಕಲೆಯ ಕುರಿತಾದ ಸೇವೆಯ ಬಗ್ಗೆ ಅಭಿಮಾನದ ಮಾತುಗಳನ್ನಾಡಿ ಶುಭ ಹಾರೈಸಿದರು.

error: