April 18, 2024

Bhavana Tv

Its Your Channel

ಬೆಂಗಳೂರಿನಲ್ಲಿ ಎಣ್ಣೆಗಾಗಿ ಗೆಳೆಯನನ್ನೇ ಕೊಚ್ಚಿ ಕೊಂದರು!

ಬೆಂಗಳೂರು : ಲಾಕ್​ಡೌನ್ ಸಡಿಲಿಕೆ ಬಳಿಕ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಮದ್ಯದ ಅಂಗಡಿಗಳು ಓಪನ್ ಆಗಿದ್ದೇ ತಡ ಮದ್ಯಪ್ರಿಯರು ನಾ ಮುಂದು ತಾ ಮುಂದು ಎಂದು ಎಣ್ಣೆ ಖರೀದಿಸಿ ಭರ್ಜರಿ ಪಾರ್ಟಿಗಳು ನಡೆಸಿದ್ದರು. ಪಾರ್ಟಿಗಳು ಜೋರಾಗಿ ಸ್ನೇಹಿತರ ನಡುವೆ ಹೊಡೆದಾಟ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ.

ಹೌದು… ಎಣ್ಣೆ ಕೊಟ್ಟಿಲ್ಲ ಎಂದು ಸ್ನೇಹಿತನನ್ನು ಕೊಲೆ ಮಾಡಿದ್ದ ಮೂವರನ್ನು ಕೆಂಗೇರಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕೃಷ್ಣಮೂರ್ತಿ, ಸಂದೀಪ್ ರೆಡ್ಡಿ ಹಾಗೂ ರೇವಣಸಿದ್ದಯ್ಯ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮೇ 31ರ ರಾತ್ರಿ ಕೆಂಗೇರಿ ಬಳಿಯ ಸ್ನೇಹಿತನ ರೂಂನಲ್ಲಿ ಭರ್ಜರಿ ಎಣ್ಣೆ ಪಾರ್ಟಿ ಆಯೋಜನೆ ಮಾಡಿದ್ರು. ಈ ವೇಳೆ ಕಂಠಪೂರ್ತಿ‌ ಮದ್ಯ ಸೇವಿಸಿ ಟೈಟ್ ಆಗಿದ್ದ ಆಸಾಮಿಗಳು ಕೊನೆ ಕ್ಷಣದಲ್ಲಿ ಎಣ್ಣೆಗಾಗಿ ಹೊಡೆದಾಡಿಕೊಂಡಿದ್ದರು. ಈ ವೇಳೆ ನಾಲ್ವರ ನಡುವೆ ಗಲಾಟೆ ತಾರಕಕ್ಕೇರಿ ಮಣಿ ಎಂಬಾತನ ಮೇಲೆ ಮೂವರು ಆರೋಪಿಗಳು ಹಲ್ಲೆ ಮಾಡಿದ್ದಾರೆ.

ಇದೇ ವೇಳೆ ಮದ್ಯದ ಬಾಟಲಿಯಿಂದ 26 ವರ್ಷದ ಮಣಿಯನ್ನು ಕೊಚ್ಚಿ ಹತ್ಯೆ ನಡೆಸಿದ್ದಾರೆ. ಸದ್ಯ ಕೆಂಗೇರಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅದೇನೇ ಇರಲಿ, ಇತ್ತೀಚೆಗೆ ನಗರದಲ್ಲಿ ಮದ್ಯದ ಅಮಲಿಗೆ ಮೂರ್ನಾಲ್ಕು ಕೊಲೆ ಪ್ರಕರಣಗಳು ದಾಖಲಾಗಿದ್ದು, ಪೊಲೀಸರನ್ನು ನಿದ್ದೆಗೆಡುವಂತೆ ಮಾಡಿವೆ.

error: