ಬೆಳಗಾವಿ ; ಜಿಲ್ಲೆಯ ಮೂಡಲಗಿ ತಾಲೂಕಿನ ಸಮೀಪದ ರಾಜಾಪುರ ಗ್ರಾಮದ ಚುನಿಮಟ್ಟಿಯಲ್ಲಿ ಮಹಾಯುದ್ದ ಟಿವಿ ಸಂಪಾದಕನ ಬರ್ಬರ ಹತ್ಯೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಇದೀಗ ಸದ್ದು ಮಾಡುತ್ತಿರುವ ಮಹಾಯುದ್ದ ಟಿವಿ ಸಂಪಾದಕ ಶಿವಾನಂದ ಕಾಚ್ಯಾಗೋಳನನ್ನ ದುಷ್ಕರ್ಮಿಗಳು ರಾತ್ರೋ ರಾತ್ರಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇನ್ನು ಕೊಲೆಯ ಕಾರಣ ತಿಳಿದು ಬಂದಿಲ್ಲ, ಮನೆಯಿಂದ ಕೇವಲ ೧೦೦ ಮೀಟರ್ ಅಂತರದಲ್ಲಿ ಶವ ಪತ್ತೆಯಾಗಿದೆ. ರಾತ್ರಿ ನೋಡಿದ ಜನ ದಂಗಾಗಿಹೋಗಿದ್ದರು. ಇನ್ನು ತನಿಖೆಯ ನಂತರ ಆರೋಪಿಗಳ ಹೆಸರು ಬಯಲಿಗೆ ಬರಬೇಕಾಗಿದೆ. ಇನ್ನು ಚಿಗುರುವ ವಯಸ್ಸಿನಲ್ಲೆ ಬರ್ಬರವಾಗಿ ಹತ್ಯೆಯಾದ ಶಿವಾನಂದ ಕಾಚ್ಯಾಗೋಳ. ಇನ್ನು ಸ್ಥಳಕ್ಕೆ ದಾವಿಸಿದ ಘಟಪ್ರಭಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂಶಯಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಒಯ್ದು ತನಿಖೆ ಮಾಡುತ್ತಿದ್ದಾರೆ.
ವರದಿ ; ಮಹೇಶ ಶರ್ಮಾ, ಬೆಳಗಾವಿ
More Stories
ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಪ್ರತಿಮೆ ಸ್ಥಾಪನೆಗೆ ಭೂಮಿ ಪೂಜೆ
ಬುಡಕಟ್ಟು ಸಿದ್ಧಿ ಸಮುದಾಯದವರ ವಿವಿಧ ಬೇಡಿಕೆಗಳ ಕುರಿತು ಸುವರ್ಣಸೌಧದಲ್ಲಿ ಸಚಿವ ಶಿವರಾಮ ಹೆಬ್ಬಾರ ರವರು ಮುಖ್ಯಮಂತ್ರಿಗೆ ಮನವಿ
10 ದಿನಗಳಲ್ಲಿ ನೇಕಾರರ ಸಮಸ್ಯೆಗಳಿಗೆ ಪರಿಹಾರ, ಸಚಿವ ಶ್ರೀರಾಮುಲು ಭರವಸೆ