April 23, 2024

Bhavana Tv

Its Your Channel

ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರಿಂದ ಕರಿಮಸೂತಿ ಏತ ನೀರಾವರಿ ಯೋಜನೆಗೆ ಗಂಗಾ ಪೂಜೆ.

ಬೆಳಗಾವಿ ; ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಇಂದು ಕರಿಮಸೂತಿ ಏತ ನೀರಾವರಿ ಯೋಜನೆಯಡಿ ಹಾಲ್ಯಾಳ್ ಏತ ನೀರಾವರಿಯಿಂದ ಕಾಲುವೆಗೆ ನೀರು ಹರಿಸುವ ಕಾರ್ಯಕ್ರಮಕ್ಕೆ ಗಂಗಾ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಇದರಿಂದ ನಮ್ಮ ತಾಲೂಕಿನ ಎಲ್ಲಾ ರೈತ ಬಾಂಧವರು ಈ ನೀರಿನ ಸದ್ಬಳಕೆ ಮಾಡಿಕೊಂಡು ಉತ್ತಮ ಬೆಳೆ ಬೆಳೆದು ಸಮೃದ್ಧಿ ಜೀವನ ನಡೆಸಬೇಕೆಂದು ಕ್ಷೇತ್ರದ ನಾಗರಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಶೈಲ ನಾಯಕ್, ದತ್ತ ವಾಸ್ಟರ,ಅರುಣ ಬಾಸoಗೆ, ಹಳ್ಯಾಳ ಗ್ರಾ.ಪಂಅಧ್ಯಕ್ಷರಾದ ಮುದುಕ್ ಶೇಗುಣಿಸಿ, ಕುಮಾರ್ ಪಾಟೀಲ್, ಶಿವಾನಂದ ದಿವಾನಮಾಳ್, ದಿಲೀಪ್ ಲೋನಾರೆ, ಅಪ್ಪು ನ್ಯಾಮೋಗೋಡ್, ಶಿವಾನಂದ್ ನಾಯಕ್, ಎಸ್ ಆರ್ ಗುಲಪ್ಪನವರ್, ಹಾಗೂ ನೀರಾವರಿ ಇಲಾಖೆಯ ಅಧೀಕ್ಷಕ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಹಾಗೂ ಮತ್ತಿತರು ಉಪಸ್ಥಿತರಿದ್ದರು.
ವರದಿ ; ಮಹೇಶ ಶರ್ಮಾ

error: