April 16, 2024

Bhavana Tv

Its Your Channel

ಗುಂಡ್ಲುಪೇಟೆ ಪಟ್ಟಣದ ಕೆ ಆರ್ ಸಿ ರಸ್ತೆ ಕಾಮಗಾರಿ ಕಳಪೆ ,ಪ್ರತಿಭಟನೆ.

ಗುಂಡ್ಲುಪೇಟೆ ; ಪಟ್ಟಣದ ದೊಡ್ಡ ಅಂಗಡಿ ಬೀದಿ ಎಂದು ಹೆಸರುವಾಸಿಯಾಗಿರುವ ಕೆ ಆರ್ ಸಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಸೋಮವಾರ ನಡೆಯುವ ಭಾರತ ಬಂ ದ್‌ಗೆ ರೈತರು ಮತ್ತು ಕನ್ನಡಪರ ಸಂಘಟನೆ ಯವರು ಒಗ್ಗೂಡಿ ಅಂಗಡಿ ಮುಂಭಾಗ ಗಳಿಗೆ ಭೇಟಿ ನೀಡಿದರು ಆ ಸಮಯದಲ್ಲಿ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಕಂಡುಬAತು ಅದರ ವಿರುದ್ಧವಾಗಿ ಪುರಸಭೆ ಇಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಸ್ಥಳಕ್ಕಾಗಮಿಸಿದ ಪುರಸಭಾ ಅಧ್ಯಕ್ಷರಾದ ಪಿ ಗಿರೀಶ್ ಮಾತನಾಡಿ ೯೦೦ ಮೀಟರ್ ಈ ರಸ್ತೆಗೆ ೧.೯೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ ಇಲ್ಲದಿದ್ದರೆ ಬಿಟ್ಟು ಹೋಗಿ ಎಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಕೆಂಡಾಮAಡಲವಾದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಕಡಬೂರು ಮಂಜುನಾಥ್, ಮಾಡ್ರಹಳ್ಳೀ ಮಹದೇವಪ್ಪ, ಕುಂದಕೆರೆ ಸಂಪತ್ತು, ಹೊನ್ನೇಗೌಡನಹಳ್ಳಿ ಶಿವಮಲ್ಲು, ಮಹೇಶ್, ಜಯಕರ್ನಾಟಕ ತಾಲೂಕು ಅಧ್ಯಕ್ಷ ಮಹೇಶ್, ಕಾವಲುಪಡೆಯ ತಾಲೂಕು ಅಧ್ಯಕ್ಷ ಅಬ್ದುಲ್ ಮಾಲಿಕ್, ಕರವೇ ತಾಲೂಕು ಅಧ್ಯಕ್ಷರಾದ ಸುರೇಶ್ ನಾಯಕ್, ಹಾಗೂ ಇನ್ನೂ ಮುಂತಾದ ಪ್ರಗತಿಪರ ಸಂಘಟನೇವರು ರೈತ ಮುಖಂಡರುಗಳು ಪುರಸಭೆಯ ಎಲ್ಲಾ ಸದಸ್ಯರುಗಳು ಹಾಜರಿದ್ದರು
ವರದಿ; ಸದಾನಂದ ಕಣ್ಣೆಗಾಲ ಗುಂಡ್ಲುಪೇಟೆ

error: