ಗುಂಡ್ಲುಪೇಟೆ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ವಿವಿಧ ರೈತರಿಗೆ ಬೇಕಾಗಿರುವ ಸಾಮಗ್ರಿಗಳನ್ನು ಕ್ಷೇತ್ರದ ಶಾಸಕರಾದ ಸಿ ಎಸ್ ನಿರಂಜನ್ ಕುಮಾರ್ ಅವರು ವಿತರಣೆ ಮಾಡಿದರು
.ನಂತರ ಮಾತನಾಡಿದವರು ಗೋಪಾಲಪುರ ಉಪ ಜಲಾನಯನ ಯೋಜನೆ ಹಾಗೂ ಬರಗಿ ಕಾರ್ಯಕಾರಿ ಸಮಿತಿ ಈ ಎರಡು ಜಲಾನಯನ ಯೋಜನೆಯ ವತಿಯಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಸವಲತ್ತುಗಳನ್ನು ನೀಡಿದ್ದು ಇದನ್ನು ಸರಿಯಾಗಿ ರೈತರು ಬಳಕೆ ಮಾಡಿಕೊಂಡು ಹೋದಲ್ಲಿ ರೈತರು ಆರ್ಥಿಕವಾಗಿ ಮುಂದೆ ಬರಬಹುದು. ಅಲ್ಲದೆ ರೈತರಿಗೆ ಅನೇಕ ಅನುಕೂಲಗಳನ್ನು ಸರ್ಕಾರ ಮಾಡಿಕೊಟ್ಟಿದೆ. ಎಂದರು. ರೈತರ ಉಪಕರಣಗಳೆಂದರೆ ಮೇವು ಕತ್ತರಿಸುವ ಯಂತ್ರ, ನೆಲಹಾಸು ವಿತರಣೆ,ರಸ ಮೇವು ತಯಾರಿಸುವ ಘಟಕ, ಜೇನುಪೆಟ್ಟಿಗೆ ಉಪಕರಣ, ಕೋಳಿ ಮರಿ ವಿತರಣೆ ,ಹಾಗೂ ಮೀನುಗಾರಿಕೆ ಇಲಾಖೆ ವತಿಯಿಂದ ಧೋನಿ ವಿತರಣೆ ಹಾಗೂ ಮೀನು ಹಿಡಿಯಲು ಬಲವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷರಾದ ಕೆ ಸಿ ಮಧು ,ಉಪಾಧ್ಯಕ್ಷರಾದ ಬಿಕ್ಸೆಸ್, ಕಿಲಗೆರೆ ಶಶಿ , ಸುಜೇಂದ್ರ,ಪುರಸಭೆ ಅಧ್ಯಕ್ಷರಾದ ಪಿ .ಗಿರೀಶ್, ಪಿ ಎಲ್ ಡಿಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಪ್ಪ, ನಿಟ್ರೆನಾಗರಾಜ ಪ್ಪ, ಚನ್ನಮ ಲ್ಲೀಪುರ ಬಸವಣ್ಣ, ಪುರಸಭೆ ಸದಸ್ಯರುಗಳು ನಾಮ ನಿರ್ದೇಶಕರುಗಳು ಕೃಷಿ ಅಧಿಕಾರಿ ಪ್ರವೀಣ್ ,ಸತೀಶ್,, ಸಿಬ್ಬಂದಿ ವರ್ಗದವರು ಹಾಗೂರೈತರು ಉಪಸ್ಥಿತರಿದ್ದರು
ವರದಿ: ಸದಾನಂದ ಕನ್ನೆಗಾಲ
More Stories
16ನೇ ತಾರೀಕು ನೀರಿಗಾಗಿ ಚಳುವಳಿ
ಚಾಮರಾಜನಗರ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ರವರಿಂದ ನಾಮಪತ್ರ ಸಲ್ಲಿಕೆ
ಚುನಾವಣಾ ಪೂರ್ವ ಸಿದ್ಧತೆಯ ಬಗ್ಗೆ ಗುಂಡ್ಲುಪೇಟೆ ತಾಲೂಕು ದಂಡಾಧಿಕಾರಿಗಳಿAದ ಮತ್ತು ಸಹಾಯಕ ಚುನಾವಣಾ ಅಧಿಕಾರಿಗಳಿಂದ ಮಾಹಿತಿ