ಗು0ಡ್ಲುಪೇಟೆ; ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಇರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಸ್ಥಾಪನೆ ಗೊಂಡು ಇಂದಿಗೆ ೫ ವರ್ಷ ಪೂರೈಸಿದ ಹಿನ್ನಲೆ ಮಠದಲ್ಲಿ ಗುರುವಾರ ರಾಯರ ಬೃಂದಾವನ ಕ್ಕೆ ಶ್ರೀ ಮಠದ ಆಡಳಿತ ಮಂಡಳಿ ವತಿಯಿಂದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು ,
೫ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಶ್ರೀ ಮಠದಲ್ಲಿ ಗುರುವಾರ ಬೆಳಿಗ್ಗೆ ೭-೦೦ ಗಂಟೆಗೆ ಶ್ರೀ ಮುಖ್ಯಪ್ರಾಣ ಹಾಗೂ ಶ್ರೀ ಗುರು ರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ೯-೦೦ಗಂಟೆಗೆ ಶ್ರೀ ಪ್ರಹ್ಲಾದ ರಾಜರಿಗೆ ಕನಕಾಭಿಷೇಕ, ೯-೩೦ಕ್ಕೆ ಶ್ರೀ ಮಠದ ಪ್ರಾಕಾರದಲ್ಲಿ ರಥೋತ್ಸವ ನಡೆಸಿ ತದನಂತರ ೧೧-೦೦ಕ್ಕೆ ಮಹಾಮಂಗಳಾರತಿ.೧೨-೦೦ ಕ್ಕೆ ಮೈಸೂರಿನ ಹೆಸರಾಂತ ವಿದುಷಿ ಶ್ರೀಮತಿ ಇಂದ್ರಾಣಿ ಅನಂತರಾಮ್ ರವರಿಂದ ಭಕ್ತಿ ಗಾನ ಸುಧೆ ಸಂಗೀತ ಕಾರ್ಯಕ್ರಮ.
ಶ್ರೀ ಮಠದ ವತಿಯಿಂದ ಪಟ್ಟಣದ ಕೆ.ಎಸ್.ಎನ್ ಶಾಲೆಯ ಮೂರು ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವನ್ನು ತಹಶಿಲ್ದಾರ್ ಸಿ.ಜೆ.ರವಿಶಂಕರ್ ಹಾಗೂ ಪುರಸಭಾ ಉಪಾಧ್ಯಕ್ಷೆ ದೀಪಿಕಾ ಅಶ್ವಿನ್ ರವರುಗಳು ವಿತರಣೆ ಮಾಡಿದರು ,
ಶ್ರೀ ಮಠಕ್ಕೆ ಭೇಟಿ ನೀಡಿದ ಭಕ್ತಾದಿಗಳಿಗೆ ಶ್ರೀ ಮಠದ ವತಿಯಿಂದ ಮಧ್ಯಾಹ್ನ ೧-೦೦ ಗಂಟೆಗೆ ಪ್ರಸಾದವಿನಿಯೋಗ. ಕಾರ್ತೀಕ ಮಾಸದ ಪ್ರಯುಕ್ತ ರಾತ್ರಿ ೬-೩೦ರಿಂದ ಭಕ್ತಾದಿಗಳಿಂದ ಶ್ರೀ ಗುರು ರಾಯರಿಗೆ ಕಾರ್ತೀಕ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು , ಶ್ರೀ ಮಠದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಭಕ್ತಾದಿಗಳು ಹಾಜರಿದ್ದರು .
ವರದಿ ; ಸದಾನಂದ ಕನ್ನೆಗಾಲ, ಗುಂಡ್ಲಪೇಟೆ
More Stories
16ನೇ ತಾರೀಕು ನೀರಿಗಾಗಿ ಚಳುವಳಿ
ಚಾಮರಾಜನಗರ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ರವರಿಂದ ನಾಮಪತ್ರ ಸಲ್ಲಿಕೆ
ಚುನಾವಣಾ ಪೂರ್ವ ಸಿದ್ಧತೆಯ ಬಗ್ಗೆ ಗುಂಡ್ಲುಪೇಟೆ ತಾಲೂಕು ದಂಡಾಧಿಕಾರಿಗಳಿAದ ಮತ್ತು ಸಹಾಯಕ ಚುನಾವಣಾ ಅಧಿಕಾರಿಗಳಿಂದ ಮಾಹಿತಿ