ಗುಂಡ್ಲುಪೇಟೆ ತಾಲ್ಲೂಕಿನ ಕಡಬೂರು ಮಂಜುನಾಥ್ ಹಾಗೂ ಮುನೀರ್ ಪಾಷಾ ರವರಿಗೆ ಕದಂಬ ಸೇವಾ ರತ್ನ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ದಿವಗಂತ ಪತ್ರಕರ್ತರಾದ ಎಂ.ಎA ರೆಹಮಾನ್ ರವರ ನೆನಪಿನ ವೇದಿಕೆ. ಕದಂಬ ಕನ್ನಡ ಸೇನೆ ಕರ್ನಾಟಕ, ಕದಂಬ ಕನ್ನಡ ದಶಮಾನೋತ್ಸವ ಚಾಮರಾಜನಗರ ಜಿಲ್ಲಾ ಬೆಳ್ಳಿ ಹಬ್ಬ ಸಂಭ್ರಮೋತ್ಸವ ಅಂಗವಾಗಿ ಕನ್ನಡ ರಾಜ್ಯೋತ್ಸವ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಚಾಮರಾಜನಗರ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ನಡೆಯಿತು
ಸಮಾರಂಭದಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಕಡಬೂರು ಗ್ರಾಮದವರಾದ ಮಂಜುನಾಥ್ ರವರು ಪ್ರಗತಿಪರ ರೈತರಾಗಿ ರೈತ ಸಂಘಟನೆ ಮೂಲಕ ಚಾಮರಾಜನಗರ ಜಿಲ್ಲೆಯಾದ್ಯಂತ ಹಲವಾರು ರೈತಪರ ನೊಂದವರ ಪರ ಹೋರಾಟಗಳನ್ನು ಮಾಡಿ ಕರೋನ ಸಂದರ್ಭದಲ್ಲಿ ಸಮಾಜ ಸೇವಾಕರಾಗಿಯೂ ಕೂಡ ಕೆಲಸ ಮಾಡಿದ್ದಾರೆ ಹಾಗೆಯೇ ಮುನೀರ್ ಪಾಷಾ ವೃತ್ತಿಯಲ್ಲಿ ಮನೆಗಳಿಗೆ ಬಣ್ಣ ಬಳಿಯುವ ಕೆಲಸ ಮಾಡಿಸುತ್ತಾ ಉಳಿದ ಹಣದಲ್ಲಿ ಸ್ವಂತ ಖರ್ಚಿನಲ್ಲಿ ಇದುವರೆಗೂ ಸುಮಾರು 150ಕ್ಕೂ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವ ಕುಟುಂಬದವರಿಗೆ ಆಹಾರ ಪದಾರ್ಥಗಳನ್ನು ನೀಡಿದ್ದಾರೆ ಪ್ರತಿ ದಿನ ಇದರ ಕಾಯಕ ದಲ್ಲಿ ತೊಡಗಿದ್ದಾರೆ ಇವರುಗಳ ಸೇವೆಯನ್ನು ಗುರುತಿಸಿ ಕದಂಬ ಕನ್ನಡ ಸೇನೆ ಕರ್ನಾಟಕ ಸಂಘಟನೆಯು ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರುನಾಡ ಯುವ ಶಕ್ತಿ ರಾಜ್ಯ ಯುವ ಘಟಕ ಅಧ್ಯಕ್ಷ ಎಸ್. ಈಶ್ವರ್ , ಚಾಮರಾಜನಗರ ಜಿಲ್ಲಾ ಯುವ ಘಟಕ ಅಧ್ಯಕ್ಷ ಮಂಜು, ಹಾಗೂ ದೀಪು , ಪತ್ರಕರ್ತ ವೇಣುಗೋಪಾಲ, ಬಲಚವಾಡಿ ರವಿ ಮತ್ತಿತರರು ಅಭಿನಂದನೆಗಳ ತಿಳಿಸಿದ್ದಾರೆ.
ವರದಿ: ಸದಾನಂದ ಕನ್ನೇಗಾಲ
More Stories
ಚುನಾವಣಾ ಪೂರ್ವ ಸಿದ್ಧತೆಯ ಬಗ್ಗೆ ಗುಂಡ್ಲುಪೇಟೆ ತಾಲೂಕು ದಂಡಾಧಿಕಾರಿಗಳಿAದ ಮತ್ತು ಸಹಾಯಕ ಚುನಾವಣಾ ಅಧಿಕಾರಿಗಳಿಂದ ಮಾಹಿತಿ
ಶ್ರೀ ಮಲೆ ಮಹದೇಶ್ವರ ಜಾತ್ರೆ
ಸೋಮೇಶ್ ಸೈಕ್ಲಿಂಗ್ ಸವಾರರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆ, ಸಾಧನೆಗೆ ಸಹಾಯ ಹಸ್ತ ಕೋರಿ ಮನವಿ