April 20, 2024

Bhavana Tv

Its Your Channel

ಶಾರದಾ ಸತ್ಸಂಗ ಹಾಗೂ ಶ್ರೀ ಭಗವದ್ಗೀತಾ ಧ್ಯಾನಶ್ಲೋಕ ಪಠಣ ಅಭಿಯಾನ

ಗುಂಡ್ಲುಪೇಟೆ : ಶ್ರೀರಾಮ ಮಂದಿರದಲ್ಲಿ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಏಕಾದಶಿಯ ಗೀತ ಜಯಂತಿ ನಿಮಿತ್ತ ತಾಲೂಕು ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಶಾರದಾ ಸತ್ಸಂಗ ಹಾಗೂ ಮಹಿಳಾ ವಿಪ್ರ ಬಳಗದ ಸದಸ್ಯರುಗಳಿಂದ ಶ್ರೀ ಭಗವದ್ಗೀತಾ ಧ್ಯಾನಶ್ಲೋಕ ಪಠಣ ಅಭಿಯಾನ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯಲ್ಲಿ ಇರುವ ಶ್ರೀ ರಾಮ ಮಂದಿರ ದಲ್ಲಿ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಏಕಾದಶಿಯ ಗೀತಾ ಜಯಂತಿ ನಿಮಿತ್ತ ತಾಲೂಕು ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಶಾರದ ಸತ್ಸಂಗ ಹಾಗೂ ಮಹಿಳಾ ವಿಪ್ರಬಳಗದ ಸದಸ್ಯರು ಗಳಿಂದ ಶ್ರೀ ಭಗವದ್ಗೀತಾ ಧ್ಯಾನ ಶ್ಲೋಕ ಪಠಣ ಅಭಿಯಾನ -2022 ಹಮ್ಮಿಕೊಳ್ಳಲಾಗಿತ್ತು ,

ತಾಲೂಕು ವಿಪ್ರ ಮಹಿಳಾ ಬಳಗದ ಅಧ್ಯಕ್ಷರಾದ ಮಾಲಾ ನಾಗರಾಜು ಸೇರಿದಂತೆ ಶಾರದ ಸತ್ಸಂಗ ಸಮಾಜದ ಅಧ್ಯಕ್ಷರಾದ ಗಾಯಿತ್ರಿ ಅನಂತು , ಬ್ರಾಹ್ಮಣ ಸಂಘದ ಉಪಾಧ್ಯಕ್ಷ ರವಿಕಾಂತ್ , ಸಿ.ಇ.ಒ. ರಮೇಶ್ , ಸದಸ್ಯರು ಗಳಾದ ನಾಗರಾಜ ಶರ್ಮ, ಡಿ.ಕೆ.ಶ್ರೀಕಂಠ ಮೂರ್ತಿ, ಎ.ಸತೀಶ್ , ಬಾಲಸುಬ್ರಹ್ಮಣ್ಯಂ, ಇಂದು ಶೇಖರ್ ಶರ್ಮ , ಲಕ್ಷ್ಮಿ ಅಶ್ವಥ್ , ಸೌಮ್ಯ ಶ್ರೀಕಂಠ ಮೂರ್ತಿ, ಮಂಜುಳ ಬಾಲಸುಬ್ರಹ್ಮಣ್ಯಂ, ಸೌಮ್ಯ ರಾಜೇಶ್ ಭಟ್ಟರು, ನಾಗರಾಜು ಜೋತಿಷ್ಯರು ಸೇರಿದಂತೆ ಇತರರು ಹಾಜರಿದ್ದರು .
ಸದಾನಂದ ಕನ್ನೆಗಾಲ

error: