ಗುಂಡ್ಲುಪೇಟೆ .ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕರುನಾಡ ಯುವಶಕ್ತಿ ಸಂಘಟನೆ ವತಿಯಿಂದ ನಡೆದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ತಾಲೂಕು ವಕೀಲರಾದ ರಾಜೇಶ್ ಮಾತನಾಡಿ ಈ ದೇಶಕ್ಕೆ ಸಂವಿಧಾನವನ್ನು ತಂದು ಕೊಟ್ಟಂತಹ ಮಹಾನ್ ವ್ಯಕ್ತಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರನ್ನು ಅವರ 66 ನೇ ಪರಿನಿಬ್ಬಾಣ ದಿನದಂದು ಇಂದು ನಾವು ಮತ್ತು ನೀವು ಎಲ್ಲಾ ಸ್ಮರಿಸೋಣ ಅವರ ಆದರ್ಶಗಳನ್ನು ಪಾಲಿಸೋಣ ಎಂದರು.
ಈ ಸಂದರ್ಭದಲ್ಲಿ ಕರುನಾಡ ಯುವಶಕ್ತಿ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಮುನೀರ್ ಪಾಷಾ, ರಾಜ್ಯ ಯುವ ಘಟಕದ ಅಧ್ಯಕ್ಷರಾದ ಎಸ್ ಈಶ್ವರ್,ಜಿಲ್ಲಾಧ್ಯಕ್ಷರಾದ ಸೈಯದ್ ಅನ್ಸರ್ ,ತಾಲೂಕು ಮಾಧ್ಯಮ ಸಮಿತಿಯ ಶಿವಕುಮಾರ್ ,ತಾಲೂಕು ಗೌರವಾಧ್ಯಕ್ಷರಾದ ರೆಹಮತ್ ಉಲ್ಲಾಖಾನ್, ತಾಲೂಕು ಯುವ ಘಟಕದ ಅಧ್ಯಕ್ಷರಾದ ಮಲ್ಲು ,ಹಾಗೂ ರಾಜೇಶ್ ಎಸ್ ವಕೀಲರು ,ನಾಗಯ್ಯ ಹೊನ್ನೇಗೌಡನಹಳ್ಳಿ, ಹಾಗೂ ಕಾಂತರಾಜು ಮೌರ್ಯ, ಪತ್ರಿಕ ವರದಿಗಾರರು ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಸದಾನಂದ ಕನ್ನೇಗಾಲ
More Stories
ಚುನಾವಣಾ ಪೂರ್ವ ಸಿದ್ಧತೆಯ ಬಗ್ಗೆ ಗುಂಡ್ಲುಪೇಟೆ ತಾಲೂಕು ದಂಡಾಧಿಕಾರಿಗಳಿAದ ಮತ್ತು ಸಹಾಯಕ ಚುನಾವಣಾ ಅಧಿಕಾರಿಗಳಿಂದ ಮಾಹಿತಿ
ಶ್ರೀ ಮಲೆ ಮಹದೇಶ್ವರ ಜಾತ್ರೆ
ಸೋಮೇಶ್ ಸೈಕ್ಲಿಂಗ್ ಸವಾರರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆ, ಸಾಧನೆಗೆ ಸಹಾಯ ಹಸ್ತ ಕೋರಿ ಮನವಿ