March 28, 2024

Bhavana Tv

Its Your Channel

ಯು.ಎಸ್.ಟಿ. ಸಿ.ಎಸ್.ಆರ್. ಮತ್ತು ವಾಸುದೈವ ಕುಟುಂಬಕ0. ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಣ್ಣೇಗಾಲ ಶಾಲಾ ನವೀಕರಣ ಉದ್ಘಾಟನೆ

ಗುಂಡ್ಲುಪೇಟೆ ತಾಲೂಕಿನ ಕನ್ನೆಗಾಲದ ಸರ್ಕಾರಿ ಶಾಲೆಯನ್ನು ಯು.ಎಸ್.ಟಿ .ಸಿ.ಎಸ್.ಆರ್. ಕಂಪನಿಯ ಕಿರಣ್ ಕುಮಾರ್ ರವರು ಶಾಲೆಯ ನವೀಕರಣದ ಉದ್ಘಾಟನೆಯನ್ನುನೆರವೇರಿಸಿ ನಂತರ ಮಾತನಾಡಿದವರು, ಈ ನವೀಕರಣ 12ನೇ ನವೀಕರಣದ ಕಾರ್ಯವಾಗಿದೆ ಹಾಗಾಗಿ ಹಳ್ಳಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷವಾಗಿ ಆದ್ಯತೆಯನ್ನು ನಮ್ಮ ಕಂಪನಿ ನೀಡುತ್ತಾ ಬಂದಿದೆ ಅಲ್ಲಿನ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸುವ ದೆಸೆಯಲ್ಲಿ ಸಾಗುತ್ತಾ ಬಂದಿದೆ ಹಾಗಾಗಿ ನಮ್ಮ ಸಂಸ್ಥೆಯ ಕಾರ್ಮಿಕ ವರುಣ್ ರವರನ್ನ ಒಮ್ಮೆ ಕೇಳಿದಾಗ ನಮ್ಮ ಗ್ರಾಮದ ಶಾಲೆ ತುಂಬಾ ಹದಗೆಟ್ಟಿದೆ ಎಂದು ಮಾಹಿತಿ ನೀಡಿದರು ಅದಕ್ಕೆ ತಕ್ಕಂತೆ ಏನೆಲ್ಲಾ ಅಭಿವೃದ್ಧಿಯಾಗಬೇಕಾಗಿದೆ ಎಂಬುದನ್ನ ಒಂದು ಪಟ್ಟಿಯ ಮೂಲಕ ಬಿಡುಗಡೆ ಮಾಡಿ ಅದಕ್ಕೆ ತಕ್ಕಂತೆ ಕಂಪನಿ ಬಹಳ ಶ್ರಮವಹಿಸಿ ಅನುದಾನವನ್ನ ನೀಡಿದೆ. ಇದರ ಪರಿಶ್ರಮ ಕಂಪನಿಗೆ ಮತ್ತು ಕಾರ್ಮಿಕರಾದ ವರುಣ್ ಪರಿಶ್ರಮ ಅನನ್ಯ ಎಂದರು.

ಈ ಸಂದರ್ಭದಲ್ಲಿ ಬಿ,ಏನ್,ಜಿ, ಸೆಂಟರ್ ಹೆಡ್ ಯುಎಸ್‌ಟಿ ಕಿರಣ್ ಕುಮಾರ್ ದೊರೆಸ್ವಾಮಿ, ಹಾಗೂ ಸ್ಮಿತಾ ಶರ್ಮಾ, ಸಿಎಸ್‌ಆರ್ ಹೆಡ್ ಯುಎಸ್‌ಟಿ ಇವರು ಮಾದ್ಯಮದೊಂದಿಗೆ ಮಾತನಾಢಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕಿಶೋರ್ ನಾರಾಯಣ್ ಅಧ್ಯಕ್ಷರು ವಾಸು ದೈವ ಕುಟುಂಬಕ0 ಚಾರಿಟೇಬಲ್ ಟ್ರಸ್ಟ್, ಅರವಿಂದ ಗೋಪಿನಾಥ ಪೋಗ್ರಾಮ್ ಮ್ಯಾನೇಜರ್ ಯುಎಸ್‌ಟಿ, ವಿಶ್ವಾಸ್ ಎಂ ಎಸ್, ಸಿ ಎಸ್ ಆರ್ ಅಂಬಾಸಿಡರ್ ಯು,ಎಸ್,ಟಿ.
ಶ್ವೇತ ಸುಬ್ಬರಾವ್, ಯು ಎಸ್ ಟಿ ವರುಣ್ ವೆಂಕಟ ಸೋಮಚಾರಿ ,ಸಿ,ಎಸ್,ಆರ್, ಲೀಡ್ ಯುಎಸ್‌ಟಿ,
ಮನು ಕೋಲಾರ ರುದ್ರಯ್ಯ ಯು ಎಸ್ ಟಿ , ಪ್ರತಿಮಾ ಚೇರುಕೂರು ಸಿಎಸ್‌ರ್ , ಯು ಎಸ್ ಟಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಸಿ ಶಿವಮೂರ್ತಿ ಬಿ ಆರ್ ಸಿ ಸರೋಜಾ ,ಸಹಾಯಕ ನಿರ್ದೇಶಕರಾದ ಮಂಜಣ್ಣ, ಮಧ್ಯಾಹ್ನದ ಉಪಹಾರ ಯೋಜನೆ ಟಿಪಿಇಓ ಸತೀಶ್, ಸಿಆರ್‌ಪಿ ಮಹದೇವೇಗೌಡ ಹಾಗೂ ಗ್ರಾಮದ ಮುಖಂಡರುಗಳು ಗ್ರಾಮ ಪಂಚಾಯತಿ ಸದಸ್ಯಗಳು ಶಾಲಾ ಮಕ್ಕಳು ಸೇರಿದಂತೆ ಎಸ್ ಟಿ ಎಂ ಸಿ ಅಧ್ಯಕ್ಷರು ಸದಸ್ಯರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲೆ ಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

error: