ಗುಂಡ್ಲುಪೇಟೆ .ಪಟ್ಟಣದ ಸಹಾಯಕ ಕೃಷಿ ಇಲಾಖೆಯ ಕಚೇರಿಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದಿAದ ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಕೃಷಿ ಇಲಾಖೆಯವರು ರೈತರಿಗೆ ಸರಿಯಾದ ವೇಳೆಗೆ ಬಿತ್ತನೆ ಬೀಜಗಳನ್ನ ಸರಿಯಾದ ಸಮಯಕ್ಕೆ ನೀಡದೆ ಕಾಲಹರಣವನ್ನ ಮಾಡುತ್ತಿರುವುದನ್ನು ರೈತ ಸಂಘದ ಮುಖಂಡರುಗಳು ಖಂಡಿಸಿ ಎಂಡಿಸಿಸಿ ಬ್ಯಾಂಕ್ ಮುಂದೆ ಮಾನವ ಸರಪಳಿ ನಿರ್ಮಿಸಿ ಕೃಷಿ ಅಧಿಕಾರಿಗಳಿಗೆ ಧಿಕ್ಕಾರಗಳನ್ನ ಕೂಗುವುದರ ಮುಖಾಂತರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಹೊನ್ನೆಗೌಡನಹಳ್ಳಿ ಶಿವಮಲ್ಲು, ಶಿವಪುರ ಮಹದೇವಪ್ಪ, ಹಂಗಳದ ಮಾಧು, ದಿಲೀಪ್ ,ಹಾಗೂ ಶಾಂತ ಮಲ್ಲಪ್ಪ, ಇನ್ನು ಮುಂತಾದ ರೈತ ಸಂಘದ ಮುಖಂಡರು ಗಳು ಇದ್ದರು.
ಸದಾನಂದ ಕನ್ನೆಗಾಲ
More Stories
ಶ್ರೀ ಮಲೆ ಮಹದೇಶ್ವರ ಜಾತ್ರೆ
ಸೋಮೇಶ್ ಸೈಕ್ಲಿಂಗ್ ಸವಾರರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆ, ಸಾಧನೆಗೆ ಸಹಾಯ ಹಸ್ತ ಕೋರಿ ಮನವಿ
ಕಾವೇರಿ ನೀರಿನ ವಿಚಾರದಲ್ಲಿ ಪ್ರಧಾನ ಮಂತ್ರಿಗಳು ಹಾಗೂ ರಾಜ್ಯದ ಸಂಸದರು ಮೌನವಹಿಸಿರುವುದು ಏಕೆ?