March 22, 2024

Bhavana Tv

Its Your Channel

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿAದ ಸಾಂಕೇತಿಕ ಪ್ರತಿಭಟನೆ.

ಗುಂಡ್ಲುಪೇಟೆ .ಪಟ್ಟಣದ ಸಹಾಯಕ ಕೃಷಿ ಇಲಾಖೆಯ ಕಚೇರಿಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದಿAದ ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಕೃಷಿ ಇಲಾಖೆಯವರು ರೈತರಿಗೆ ಸರಿಯಾದ ವೇಳೆಗೆ ಬಿತ್ತನೆ ಬೀಜಗಳನ್ನ ಸರಿಯಾದ ಸಮಯಕ್ಕೆ ನೀಡದೆ ಕಾಲಹರಣವನ್ನ ಮಾಡುತ್ತಿರುವುದನ್ನು ರೈತ ಸಂಘದ ಮುಖಂಡರುಗಳು ಖಂಡಿಸಿ ಎಂಡಿಸಿಸಿ ಬ್ಯಾಂಕ್ ಮುಂದೆ ಮಾನವ ಸರಪಳಿ ನಿರ್ಮಿಸಿ ಕೃಷಿ ಅಧಿಕಾರಿಗಳಿಗೆ ಧಿಕ್ಕಾರಗಳನ್ನ ಕೂಗುವುದರ ಮುಖಾಂತರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಹೊನ್ನೆಗೌಡನಹಳ್ಳಿ ಶಿವಮಲ್ಲು, ಶಿವಪುರ ಮಹದೇವಪ್ಪ, ಹಂಗಳದ ಮಾಧು, ದಿಲೀಪ್ ,ಹಾಗೂ ಶಾಂತ ಮಲ್ಲಪ್ಪ, ಇನ್ನು ಮುಂತಾದ ರೈತ ಸಂಘದ ಮುಖಂಡರು ಗಳು ಇದ್ದರು.
ಸದಾನಂದ ಕನ್ನೆಗಾಲ

error: