April 19, 2024

Bhavana Tv

Its Your Channel

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜ್ಞಾನ ವಿಕಾಸ ಕಾರ್ಯಕ್ರದಡಿಯಲ್ಲಿ ಬೀದಿ ನಾಟಕ

ಬಾಗೇಪಲ್ಲಿ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಾಗೇಪಲ್ಲಿ ಪಟ್ಟಣದ ಗೀತಾಮಂದಿರ ಭವನದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಬಾಗೇಪಲ್ಲಿ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಪಿ.ಜಿ. ಗಿರೀಶ್ ಬೀದಿ ನಾಟಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಚಿಂತಾಮಣಿ ಕಲಾವಿದರು ಕಾರ್ಯಕ್ರಮದಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಸ್ವಚ್ಛತೆ, ಬಾಲ್ಯ ವಿವಾಹ, ದುಶ್ಚಟ ಮುಕ್ತ ಜೀವನ, ಆರೋಗ್ಯ, ಕಾನೂನಿನ ಹಾಗೂ ಕರೋನ ಲಸಿಕೆ ಬಗ್ಗೆ ಚಿಂತಾಮಣಿ ಕಲಾತಂಡದವರು ಹಾಡುಗಳ ಮುಖಾಂತರ ನೆರೆದ ಜನರಲ್ಲಿ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅದ್ಯಕ್ಷ ಬಿ.ಆರ್.ನರಸಿಂಹ ನಾಯ್ಡು, ಶ್ರೀಮತಿ ಸುಜಾತ ನರಸಿಂಹ ನಾಯ್ಡು, ಸಮಾಜ ಸೇವಕ ಹಾಗೂ ಬಿಳ್ಳೂರು ಆಂಜನೇಯ ಸ್ವಾಮಿ ಟ್ರಸ್ಟ್ ಅದ್ಯಕ್ಷ ಬಿಳ್ಳೂರು ಕೆ.ಎಂ.ನಾಗರಾಜು, ಕೃಷಿ ಅಧಿಕಾರಿ ಧನಂಜಯ ಮೂರ್ತಿ, ಸಾರಮ್ಮ ,ಗಾಯತ್ರಿ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: