April 23, 2024

Bhavana Tv

Its Your Channel

ಗಣೇಶ ಚತುರ್ಥಿಗೆ ಕೊರೊನಾ ಕರಿನೆರಳು..! ಸಂಕಷ್ಟದಲ್ಲಿ ಮೂರ್ತಿ ತಯಾರಕರು

ಬಾಗೇಪಲ್ಲಿ:– ಕಳೆದ ವರ್ಷದಂತೆ ಈ ವರ್ಷವೂ ಗಣೇಶ ಉತ್ಸವಕ್ಕೆ ಕೊರೊನಾ ಕರಿ ನೆರಳು ಕವಿದಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಸಾಕಷ್ಟು ನಿಬಂಧನೆ ಹೇರಿದ ಹಿನ್ನೆಲೆ ಗಣೇಶ ಮೂರ್ತಿ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರದಿಂದ ಪರಿಹಾರ ವಿತರಣೆ ಮಾಡುವಂತೆ ಆಗ್ರಹಿಸಿದ್ದಾರೆ.

ಇಲ್ಲಿನ ಗಣೇಶ ಉತ್ಸವದ ಸಡಗರ ನೋಡುವುದೇ ಒಂದು ಸೊಬಗು. ಗಣೇಶ ಉತ್ಸವ ವಿಸರ್ಜನೆ ಮೆರವಣಿಗೆಯೇ ೨೪ ಗಂಟೆಗೂ ಹೆಚ್ಚು ಕಾಲ ನಡೆದು, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆಯುತ್ತಿದ್ದವು. ಆದರೆ ಕಳೆದ ಎರಡು ವರ್ಷಗಳಿಂದ ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಗಣೇಶೋತ್ಸವದ ಮೇಲೆ ಕೊರೊನಾ ವೈರಸ್‌ನ ಕೆಟ್ಟ ಕಣ್ಣು ಬಿದ್ದು ಸಂಭ್ರಮ ಕಣ್ಮರೆಯಾಗಿದೆ.

ಅತ್ಯಂತ ಸಡಗರದಿಂದ ನಡೆಯುತ್ತಿದ್ದ ಉತ್ಸವ ಈ ಸಲ ಸರಳವಾಗಿ ನಡೆಯುತ್ತಿದೆ. ಪರಿಣಾಮ ಮೂರ್ತಿ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಗಣೇಶ ಮೂರ್ತಿ ತಯಾರಕರಿಗೆ ಶೇ.೪೦ರಷ್ಟು ಹೆಚ್ಚು ಆರ್ಥಿಕ ಹೊರೆ ಬೀಳ್ಳುತ್ತಿದೆ. ಗಣೇಶ ಮೂರ್ತಿ ತಯಾರಕರು ತೀವ್ರ ಆರ್ಥಿಕ ತೊಂದರೆಗೆ ಸಿಲುಕಿದ್ದಾರೆ. ಈ ಹಿನ್ನೆಲೆ ಸರ್ಕಾರ ಗಣೇಶ ಮೂರ್ತಿ ತಯಾರಕರಿಗೆ ಪರಿಹಾರ ನೀಡಬೇಕೆಂದು ವಿಗ್ರಹಗಳ ತಯಾರಕರು ಹಾಗೂ ಮಾರಾಟಗಾರರು ಒತ್ತಾಯಿಸಿದ್ದಾರೆ.

ರಾ.ನ.ಗೋಪಾಲ ರೆಡ್ಡಿ, ಬಾಗೇಪಲ್ಲಿ

error: