ಬಾಗೇಪಲ್ಲಿ : ಅಸ್ಕರ್ ಫರ್ನಾಂಡೀಸ್ ಧೀಮಂತ ವ್ಯಕ್ತಿತ್ವವುಳ್ಳ ರಾಜಕೀಯ ಮುಸ್ಸದಿ, ಅವರ ಸಾವು ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಠ ಎಂದು ಪುರಸಭೆ ಮಾಜಿ ಅಧ್ಯಕ್ಷ ಜಿ.ವಿ.ಬಾಬುರೆಡ್ಡಿ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಾಗೇಪಲ್ಲಿ ತಾಲ್ಲೂಕಿಗೆ ಆಸ್ಕರ್ ಫರ್ನಾಂಡಿಸ್ ಬಿಡದ ನಂಟು. ಅವರು ಬಾಗೇಪಲ್ಲಿ ತಾಲ್ಲೂಕಿಗೆ ಭೇಟಿ ನೀಡಿ ಆಗಿನ ಬರಗಾಲದಲ್ಲಿ ತಾಲ್ಲೂಕಿನಾದ್ಯಂತ ೮ ಗಂಜಿ ಕೇಂದ್ರಗಳನ್ನು ಹಾಗೂ ತಾಲ್ಲೂಕಿನಾದ್ಯಂತ ೮ ಗೋ ಶಾಲೆಗಳನ್ನು ಪ್ರಾರಂಭಿಸಿ ಅಂತಹ ಕಷ್ಟ ಕಾಲದಿಂದಲೂ ಬರಗಾಲವನ್ನು ನಿಭಾಯಿಸಿರುವ ಘನತೆ
ಆಸ್ಕರ್ ಫರ್ನಾಂಡಿಸ್ ರವರಗೆ ಸಲ್ಲುತ್ತದೆ. ಎಂದ ಅವರು, ಅವರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅಕಾಲಿಕ ಮರಣಕ್ಕೆ ಬಾಗೇಪಲ್ಲಿ ತಾಲ್ಲೂಕು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಯವರು ಹಾಗೂ ಮಾಜಿ ಶಾಸಕ ಎನ್.ಸಂಪAಗಿ ತೀವ್ರ ಸಂತಾನವನ್ನು ವ್ಯಕ್ತಪಡಿಸಿದ್ದಾರೆ.
ವರದಿ : ರಾ.ನ.ಗೋಪಾಲ ರೆಡ್ಡಿ, ಬಾಗೇಪಲ್ಲಿ
More Stories
ಬಾಗೇಪಲ್ಲಿ ಕ್ಷೇತ್ರದ 3 ಲಕ್ಷ ನಾಗರೀಕರಿಗೆ ಪೂರ್ಣ ಪ್ರಮಾಣದಲ್ಲಿ ಉಚಿತ ಹೆಲ್ತ್ ಕಾರ್ಡ್ ವಿತರಣೆ
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ
ಗುರಿ ಮುಟ್ಟಬೇಕು ಎನ್ನುವ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು- ಡಾ. ಎ.ಹೆಚ್.ರಾಮರಾವ್