April 16, 2024

Bhavana Tv

Its Your Channel

ಎಲ್.ಎನ್.ರಘುರವರ ಪುಣ್ಯ ತಿಥಿ ಪ್ರಯುಕ್ತ ಬೆಡ್ ಶೀಟ್ ಹಾಗೂ ತಟ್ಟೆ ಲೋಟ ವಿತರಣೆ

ಬಾಗೇಪಲ್ಲಿ ;- ತಾಲ್ಲೂಕಿನ ಪಾತಪಾಳ್ಯ ಹೋಬಳಿಯ ತೋಳಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಲ್ಲಚೇರವು ಗ್ರಾಮದ ಶ್ರೀ ಭಯಲಾಂಜನೇಯಸ್ವಾಮೀ ದೇವಸ್ಥಾನದ ಆವರಣದಲ್ಲಿ ಇಂದು ಪಾತಪಾಳ್ಯ ನಾಡಕಛೇರಿಯ ರಾಜಸ್ವ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ಕರೋನ ರೋಗದಿಂದ ಮೃತ ಪಟ್ಟ ಎಲ್.ಎನ್.ರಘು ರವರ ಒಂದು ವರ್ಷದ ಪುಣ್ಯತಿಥಿ ಹಾಗೂ ಅವರ
ಜ್ಞಾಪಕಾರ್ಥವಾಗಿ ಅವರ ಕುಟುಂಬದ ಸದಸ್ಯರು ಹಾಗೂ ಪಾತಪಾಳ್ಯ ಗ್ರಾಮದ ನಾಡ ಕಛೇರಿ ವತಿಯಿಂದ ಅನಾಥರಿಗೆ, ವೃದ್ದರಿಗೆ ಹಾಗೂ ಬಡವರಿಗೆ ಬೆಡ್ ಶೀಟ್, ತಟ್ಟೆ ,ಲೋಟಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅನ್ನದಾನವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ವಿದ್ಯಾ, ರಾಜಸ್ವ ನಿರೀಕ್ಷಕರಾದ ಗಂಗಾಧರ್ ಮೂರ್ತಿ, ಗ್ರಾಮ ಲೆಕ್ಕಿಗ ವೇಂಕಟೇಶ್, ವಿನೋದ್ ಕುಮಾರ್, ಅಭಿಷೇಕ್.ಹಾಗೂ ಪಾತಪಾಳ್ಯ ನಾಡಕಛೇರಿಯ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ಪಾತಪಾಳ್ಯ ಹೋಬಳಿ ಗ್ರಾಮಸ್ಥರು ಹಾಜರಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ.

error: