ಬಾಗೇಪಲ್ಲಿ:- ೭ ವರ್ಷಗಳಿಂದ ದೇಶದ ಜನತೆಗೆ ಸುಳ್ಳು ಹೇಳುವ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಅಭಿವೃದ್ಧಿ ಬಯಸುವುದು ಸಾಧ್ಯವಿಲ್ಲ’ ಎಂದು ಭಾರತ ಕಮ್ಯೂನಿಸ್ಟ್( ಮಾರ್ಕ್ಸ್ ವಾದಿ) ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಆರೋಪಿಸಿದ್ದಾರೆ.
ಅವರು ಸೋಮವಾರ ಪಟ್ಟಣದ ಗೂಳೂರು ವೃತ್ತದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ೧೭ನೇ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
”ದೇಶದ ಜನತೆ ಪ್ರತೀ ವರ್ಷ ೩೫ ಲಕ್ಷ ಕೋಟಿ ರೂಪಾಯಿ ಯಂತೆ ಕಳೆದ ೭ ವರ್ಷಗಳಿಂದ ಸುಮಾರು ೨೫೦ ಲಕ್ಷ ಕೋಟಿ ರೂಪಾಯಿ ಹಣ ತೆರಿಗೆ ಪಾವತಿಸಿದ್ದಾರೆ. ಜನತೆಗೆ ಅನುಕೂಲವಾಗುವಂತಹ ಯಾವ ಕೆಲಸ ಮಾಡಿದ್ದಾರೆ” ಎಂದು ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
”೨೦೧೪ ರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ೧೫ ಲಕ್ಷ ರೂಪಾಯಿ, ಬಡವರಿಗೆ ವಸತಿ, ಮಹಿಳೆರಿಗೆ ರಕ್ಷಣೆ ಸೇರಿದಂತೆ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ” ಎಂದು ಆರೋಪಿಸಿದರು.
”ಪ್ರಪಂಚದಲ್ಲಿಯೇ ಅಪೌಷ್ಟಿಕತೆಯಿಂದ ಬಳಲುತ್ತಿರುವ ೧೦೭ ದೇಶಗಳಲ್ಲಿ ಭಾರತಕ್ಕೆ ೧೦೧ ಸ್ಥಾನ ಇದೆ. ದೇಶದಲ್ಲಿ ಪ್ರತೀ ನಿಮಿಷಕ್ಕೆ ೧೨ ಜನ ಹಸಿವುನಿಂದ ಸಾವನ್ನಾಪ್ಪುತ್ತಿದ್ದಾರೆ. ದೇಶವನ್ನು ಆಳುತ್ತಿರುವು ಬಿಜೆಪಿ ಪಕ್ಷಕ್ಕೆ ನಾಚಿಕೆ ಆಗಬೇಕು. ದೇಶದ ಜನರಲ್ಲಿ ಖರೀದಿ ಮಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಈಗಾಗಿ ಸುಮಾರು ೧೮ ಲಕ್ಷ ಕೈಗಾರಿಕೆಗಳು ಮುಚ್ಚಿವೆ. ಅದರಲ್ಲಿ ದುಡಿಯುತ್ತಿರುವ ಜನ ಬೀದಿಗೆ ಬಂದಿದ್ದಾರೆ” ಎಂದು ತಿಳಿಸಿದರು.
”ಇಂತಹ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಮುಂದಿನ ಮೂರು ವರ್ಷಗಳ ವರೆಗೆ ಪಕ್ಷ ಹೇಗೆ ಬಡವರ ಮಧ್ಯೆ ಕೆಲಸ ಮಾಡುವ ಬಗ್ಗೆ ಚರ್ಚಿಸಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಜನರ ಸಮಸ್ಯೆ ಗಳನ್ನು ಪರಿಹರಿಸುವ ಯಾವುದೇ ಕಾಳಜಿ ಇಲ್ಲವಾಗಿದೆ” ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕೇರಳ್ ರಾಜ್ಯದ ಮಾಜಿ ಶಿಕ್ಷಣ ಸಚಿವ ಹಾಗೂ ಸಿಪಿಐಎಂ ಪಕ್ಷದ ಪಾಲಿಟ್ ಬ್ಯುರೋ ಸದಸ್ಯ ಎಂ.ಎ. ಬೇಬಿ ರಾಜ್ಯ ಕಾರ್ಯದರ್ಶಿ. ಉಮೇಶ, ಸಿಪಿಐಎಂ ಕೆ ಆರ್ ಪಿ ಎಸ್ ಜಿಲ್ಲಾ ಕಾರ್ಯದರ್ಶಿ ಪಿ. ಮಂಜುನಾಥರೆಡ್ಡಿ ಪ್ರಜಾ ವೈದ್ಯ ಡಾ,ಅನಿಲ್ ಕುಮಾರ್ ಅವುಲಪ್ಪ. ರಾಮ ನಾಯಕ್ . ಸಾವಿತ್ರಮ್ಮ. ಅಶ್ವಥಪ್ಪ ರಘುರಮರೆಡ್ಡಿ. ಕೃಷ್ಣಮೂರ್ತಿ. ಜಯರಾಮರೆಡ್ಡಿ. ಶ್ರೀರಾಮಪ್ಪ.ಆಂಜನೇಯರೆಡ್ಡಿ. ಮುಸ್ತಫ್. ವರಲಕ್ಷ್ಮಿ. ಶೋಬರಾಣಿ. ಹೇಮಚಂದ್ರ .ಹಾಗೂ ಸಿಪಿಎಂ ಕಾರ್ಯಕರ್ತರು ಹಾಜರಿದ್ದರು
ವರದಿ:-ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು
More Stories
ಬಾಗೇಪಲ್ಲಿ ಕ್ಷೇತ್ರದ 3 ಲಕ್ಷ ನಾಗರೀಕರಿಗೆ ಪೂರ್ಣ ಪ್ರಮಾಣದಲ್ಲಿ ಉಚಿತ ಹೆಲ್ತ್ ಕಾರ್ಡ್ ವಿತರಣೆ
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ
ಗುರಿ ಮುಟ್ಟಬೇಕು ಎನ್ನುವ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು- ಡಾ. ಎ.ಹೆಚ್.ರಾಮರಾವ್