April 20, 2024

Bhavana Tv

Its Your Channel

ಗುಂಡಿಕ್ಕಿ ವ್ಯಕ್ತಿ ಕೊಲೆ : “ಚಾರ್ಮಾಡಿ ಕಾಡಲ್ಲಿ ಶವ ಹೂತು ಹಾಕಿದ ಜೊತೆಗಾರರು”..!!

ಮೂಡಿಗೆರೆ: ಮನೆಯಲ್ಲಿದ್ದ ವ್ಯಕ್ತಿಯನ್ನು ಕೆಲಸಕ್ಕೆಂದು ಕರೆದುಕೊಂಡು ಹೋಗಿ ಜೊತೆ ಹೋದವರೇ ಕೊಂದು ಕಾಡಿನ ಮಧ್ಯೆ ಹೂತು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಿದರುತಳ ಗ್ರಾಮದಲ್ಲಿ ನಡೆದಿದೆ.
ಕಳೆದ ಗುರುವಾರ ಕೊಟ್ಟಿಗೆಹಾರ ಸಮೀಪದ ಬಾಳೂರು ಗ್ರಾಮದ ನಾಗೇಶ್ ಆಚಾರ್ ಎಂಬುವನನ್ನು ಸ್ಥಳೀಯ ಕೃಷ್ಣೇಗೌಡ ಎಂಬುವರು ತಮ್ಮ ಜೀಪಿನಲ್ಲೇ ಕೆಲಸಕ್ಕೆಂದು ಕರೆದುಕೊಂಡು ಹೋಗಿದ್ದರು.

ಆ ಬಳಿಕ ನಾಗೇಶ್ ಮನೆಗೆ ಹಿಂದಿರುಗಿ ಬರದ ಹಿನ್ನೆಲೆ ನಾಗೇಶ್ ಪತ್ನಿ ಪ್ರಶ್ನಿಸಿದಾಗ ಕೃಷ್ಣೇಗೌಡ ನನಗೆ ಗೊತ್ತಿಲ್ಲ ಎಂದು ಹೇಳಿದ್ದ. ಗಂಡ ನಾಪತ್ತೆಯಾದ ಹಿನ್ನೆಲೆ ಪತ್ನಿ ಸುಮ ಬಾಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ ಕೊಂದ ಕೃಷ್ಣೇಗೌಡ ಕೂಡ ಏನೂ ಗೊತ್ತಿಲ್ಲದವನಂತೆ ಪೊಲೀಸರು, ಸ್ಥಳಿಯರ ಜೊತೆ ಹುಡುಕಾಡುವ ನಾಟಕ ಮಾಡಿದ್ದ. ಆದರೆ, ತನ್ನ ಜೀಪಿನಲ್ಲಿ ಕರೆದುಕೊಂಡ ಹೋದ ಕೃಷ್ಣೇಗೌಡನೇ ಆತನಿಗೆ ಗುಂಡಿಟ್ಟು ಕೊಂದು ಚಾರ್ಮಾಡಿ ಅರಣ್ಯದ ಮಧ್ಯೆ ಹೂತು ಹಾಕಿದ್ದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಆಗಮಿಸಿದ ಬಾಳೂರು ಠಾಣೆ ಪೊಲೀಸರು ಹಾಗೂ ತಹಶೀಲ್ದಾರ್ ನಾಗರಾಜ್ ನೇತೃತ್ವದಲ್ಲಿ ಮಣ್ಣಿನಲ್ಲಿ ಹೂತಿಟ್ಟಿದ್ದ ಶವವನ್ನು ಹೊರತೆಗೆದಿದ್ದಾರೆ.
ಶವವನ್ನು ಪ್ರಪಾತದಲ್ಲಿ ಹೂತು ಹಾಕಿದ್ದರಿಂದ ಹರಸಾಹಸಪಟ್ಟು ಮೃತದೇಹವನ್ನ ಮೇಲಕ್ಕೆ ತರುವಲ್ಲಿ ಮೂಡಿಗೆರೆ ಫಿಷ್ ಮೋನು ನೇತೃತ್ವದ ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ತಂಡ ಹಾಗೂ ಸಾರ್ವಜನಿಕರು ಪೊಲೀಸರ ಜೊತೆ ಕೈಜೋಡಿಸಿದರು.
ಪೊಲೀಸರು ಪ್ರಕರಣ ದಾಖಲಿಸಿ ಈಗಾಗಲೇ ಕೃತ್ಯಕ್ಕೆ ಸಂಬoಧಿಸಿ ಕೃಷ್ಣೇಗೌಡ ಹಾಗೂ ಹೆಣವನ್ನ ಹೂತು ಹಾಕಲು ಸಹಕರಿಸಿದ ಮತ್ತಿಬ್ಬರನ್ನು ಬಂಧಿಸಲಾಗಿದೆ

error: