March 25, 2024

Bhavana Tv

Its Your Channel

ನಕಲಿ ಬಯೋ ಡಿಸೇಲ್ ಮಾರಾಟ ಅಡ್ಡೆ ಮೇಲೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳಿಂದ ದಾಳಿ

ವರದಿ ಬಿ ಎಸ್ ಹೊಸೂರ.

ವಿಜಯಪುರ: ನಕಲಿ ಬಯೋ ಡಿಸೈಲ್ ಮಾರಾಟ ಅಡ್ಡೆ ಮೇಲೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳಿಂದ ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಝಳಕಿ ಗ್ರಾಮದ ಬಳಿ ನಡೆದಿದೆ.
ಶೆಡ್ ನಲ್ಲಿ ನಕಲಿ ಬಯೋ ಡಿಸೈಲ್ ಮಾರಾಟ ಮಾಡುತ್ತಿದ್ದ ತಂಡ ದಾಳಿ ನಡೆಯುತ್ತಲೇ ಸ್ಥಳದಿಂದ ನಕಲಿ ಬಯೋ ಡಿಸೈಲ್ ಮಾರಾಟಗಾರರು ಪರಾರಿಯಾಗಿದ್ದಾರೆ. ಇನ್ನು ಖಚಿತ ಮಾಹಿತಿ ಮೇರೆಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಎಸ್ ವೈ ಮಾರಿಹಾಳ, ಅಧಿಕಾರಿ ಅಂಬರೀಷ್ ತಾಂಡೂರ್ ನೇತೃತ್ವದಲ್ಲಿ ನಡೆದ ದಾಳಿ ಮಾಡಿದ್ದಾರೆ. ನಕಲಿ ಬಯೋ ಡೀಸೈಲ್ ಮಾರಾಟ ಮಾಡಲು ಉಪಯೋಗಿಸುತ್ತಿದ್ದ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: