ಹೊನ್ನಾವರ: ಪುರಾಣ ಪ್ರಸಿದ್ಧ ಇಡಗುಂಜಿ ಕ್ಷೇತ್ರದಲ್ಲಿ ಮಂಗಳವಾರ ಅಂಗಾರಕಿ ಸಂಕಷ್ಷಿಯAದು ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಸಿದ್ದಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಇಡಗುಂಜಿ ಯಲ್ಲಿ ಗಣೇಶ ಚತುರ್ಥಿ,ರಥಸಪ್ತಮಿ ಹಾಗೂ ಮಂಗಳವಾರ ಅಂಗಾರಕಿ ಸಂಕಷ್ಟಿಯAದು ಸಾವಿರಾರು ಭಕ್ತರು ದೇವರ ದರ್ಶನ ಪಡೆಯುತ್ತಾರೆ. ಕಳೆದ ಒಂದುವರೆ ವರ್ಷದಿಂದ ಕರೋನಾ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಯಾವ ಕಾರ್ಯಕ್ರಮಗಳು ದೊಡ್ಡ ಪ್ರಮಾಣ ನಡೆಯುತ್ತಿರಲಿಲ್ಲ. ಮಂಗಳವಾರ ಸುಪ್ರೀಂ ಕೋರ್ಟ್ ರಿಸೀವರ್, ಜಿಲ್ಲಾ ನ್ಯಾಯಧೀಶರ ಮಾರ್ಗದರ್ಶನದಂತೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬೆಳಿಗ್ಗೆ ೫-೦೦ಗಂಟೆಯಿOದಲೇ ಭಕ್ತರಿಗೆ ದೇವರ ದರ್ಶನ ಕಲ್ಪಿಸಿಕೊಡಲಾಗಿತ್ತು. ಇಡಗುಂಜಿ ಗಣಪನ ಸನ್ನಿಧಿಯಲ್ಲಿ ಎರಡೂ ನೂರಕ್ಕೂ ಹೆಚ್ಚು ಗಣಹೋಮ, ನೂರಕ್ಕೂ ಹೆಚ್ಚು ಸತ್ಯಗಣಪತಿ ವೃತಕಥೆಗಳು ನಡೆದವು.
ಭಕ್ತರು ಅತ್ಯಂತ ಭಕ್ತಿ ಶೃದ್ದೆಯಿಂದ ಸಂಜೆಯವರೆಗೆ ದರ್ಶನ ಮಾಡಿದರು. ಮಹಾಪೂಜೆ, ಅಭಿಷೇಕ, ಪಂಚಕಜ್ಜಾಯ ಸೇವೆಗಳು ನಡೆದವು.
ವರದಿ: ವೆಂಕಟೇಶ ಮೇಸ್ತ ಹೊನ್ನಾವರ
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.