April 25, 2024

Bhavana Tv

Its Your Channel

ಧಾರ್ಮಿಕ ವಿಧಿ ವಿಧಾನಗಳಿಂದ ನಡೆದ ಗುಳಿಗದ ನೇಮೋತ್ಸವ

ಕಾರ್ಕಳ ತಾಲೂಕು ಗುಳಿಗದ ನೇಮೋತ್ಸವ ಗುರುವಾರದಂದು ವರ್ಷಂಪ್ರತಿ ನಡೆಯುವ ದೈವದ ಕೊಲ ಹಾಗೂ ಧಾರ್ಮಿಕ ವಿಧಿ ವಿಧಾನಗಳು ಕಾರ್ಕಳ ಪೊಲೀಸ್ ಇಲಾಖೆಯ ವತಿಯಿಂದ ನಡೆಯಿತು.

ಭಕ್ತಾಧಿಗಳು ಗುಳಿಗ ದೈವದ ಸಿರಿ ಮುಡಿ ಗಂದ ಪ್ರಸಾದ ಹಾಗೂ ಅನ್ನಸಂತರ್ಪಣೆ ಸ್ವೀಕರಿಸಿ ಪುನೀತರಾದರು.

ಈ ಸಂದರ್ಭದಲ್ಲಿ ಕಾರ್ಕಳ ಡಿ.ವೈ.ಎಸ್.ಪಿ ವಿಜಯ ಪ್ರಸಾದ್ ,ಕಾರ್ಕಳ ಸರ್ಕಲ್ ಇನ್ಸ್ಪೆಕ್ಟರ್ ಸಂಪತ ಕುಮಾರ್, ಕಾರ್ಕಳ ನಗರ ಠಾಣಾಧಿಕಾರಿ ಪ್ರಸನ್ನ, ಕ್ರೈಂ ಎಸ್ ಐ.ದಾಮೋದರ್, ಗ್ರಾಮಾಂತರ ಎಸ್.ಐ. ತೇಜಸ್ವಿ, ಗ್ರಾಮಾಂತರ ಕ್ರೈಂ ಎಸ್.ಐ ಜನಾರ್ಧನ, ಅಜಕಾರ್ ಎಸ್.ಐ.ಸುದರ್ಶನ್,ಹೆಬ್ರಿ ಎಸ್.ಐ. ಮಹೇಶ್ ಹಾಗೂ ಎಲ್ಲಾ ಕಾರ್ಕಳ ಪೊಲೀಸ್ ಇಲಾಖೆಯವರು ಉಪಸ್ಥಿತರಿದ್ದರು.

ವರದಿ:ಅರುಣ ಭಟ್ ಕಾರ್ಕಳ

error: