April 17, 2024

Bhavana Tv

Its Your Channel

ತುಪ್ಪದಮಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸನ ಎಂ.ಬಿ ಹರೀಶಕುಮಾರ್ ಆಯ್ಕೆ

ನಾಗಮಂಗಲ:- ಮಾಜಿ ಸಚಿವ ಚಲುವರಾಯಸ್ವಾಮಿ ತೆಕ್ಕೆಗೆ ತುಪ್ಪದಮಡು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ತುಪ್ಪದಮಡ ಗ್ರಾಮದ ಎರಡನೇ ಬ್ಲಾಕ್ ನಿಂದ ಆಯ್ಕೆಯಾಗಿದ್ದ ಎಂ.ಬಿ. ಹರೀಶ್ ಕುಮಾರ್ ಅವರು ಅಧಿಕಾರ ಹಂಚಿಕೆಯAತೆ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ

ತುಪ್ಪದಮಡ ಗ್ರಾಮ ಪಂಚಾಯತಿಯಲ್ಲಿ ಒಟ್ಟು ಹನ್ನೆರಡು ಸ್ಥಾನಗಳಿದ್ದು 8 ಸ್ಥಾನಗಳು ಕಾಂಗ್ರೆಸ್ ನಾಲ್ಕು ಸ್ಥಾನಗಳು ಜೆ.ಡಿ.ಎಸ್. ಸದಸ್ಯರು ಇರುತ್ತಾರೆ ಅಧಿಕಾರ ಹಂಚಿಕೆಯAತೆ ರಾಘವೇಂದ್ರರವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಚೆಲುವರಾಯಸ್ವಾಮಿ ಬಣದ ಎಂ ಬಿ ಹರೀಶಕುಮಾರ್ ಅವರು ಆಯ್ಕೆ ಆಗಿದ್ದಾರೆ

ನೂತನ ಅಧ್ಯಕ್ಷರಾದ ಹರೀಶ್ ಕುಮಾರ ರವರು ಮಾತನಾಡಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ ನನ್ನ ನೆಚ್ಚಿನ ನಾಯಕರಾದ ಚೆಲುವರಾಯಸ್ವಾಮಿ ರವರು ಕಾಂಗ್ರೆಸನ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಮ್ಮ ಮುಖಂಡರುಗಳಿಗೆ ನನ್ನ ಧನ್ಯವಾದಗಳನ್ನು ತಿಳಿಸುವೆ ಇನ್ನು ಮುಂದೆಯೂ ಕೂಡ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿಯಲ್ಲಿ ಪಕ್ಷಾತೀತವಾಗಿ ಎಲ್ಲರೂ ಕೂಡ ಕೈಜೋಡಿಸಬೇಕೆಂದು ಮನವಿ ಮಾಡಿದರು

ನಾಗಮಂಗಲ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ. ಪ್ರಸನ್ನರವರು ಮಾತನಾಡಿ ಚುನಾವಣೆಗಳನ್ನು ಆ ದಿನದ ಮಟ್ಟಿಗೆ ಮಾತ್ರ ಸಂಭ್ರಮಿಸಿ ಗ್ರಾಮಾಂತರ ಪ್ರದೇಶದಲ್ಲಿ ಹಳ್ಳಿಗಳ ಅಭಿವೃದ್ಧಿಯತ್ತ ಎಲ್ಲರನ್ನೂ ಜೊತೆಗೂಡಿಸಿ ಉತ್ತಮವಾದ ಕೆಲಸಗಳನ್ನು ಮಾಡಿ ಜನಪ್ರಿಯತೆಯನ್ನು ಗಳಿಸಿ ಎಂದು ಶುಭಕೋರಿದರು

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಪುಟ್ಟ ಅರಸಯ್ಯ. ಚಿಕ್ಕಮ್ಮ, ಗೋವಿಂದ, ಟಿ ಎ ಪಿ ಸಿ ಎಂ ಎಸ್ ನಿರ್ದೇಶಕರಾದ ರಮೇಶ್ .ಪಾರ್ವತಿ ಯೋಗೇಶ್, ಚೆಲುವರಾಯಸ್ವಾಮಿ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ರವಿಕಾಂತೇಗೌಡ. ಕಾಂಗ್ರೆಸ ಮುಖಂಡರಾದ ಪವಿ. ವಸಂತ್. ಶರತ್ ರಾಮಣ್ಣ. ನೂರಾರು ಜನ ಚೆಲುವರಾಯಸ್ವಾಮಿ ಅಭಿಮಾನಿಗಳು ಮತ್ತು ಕಾಂಗ್ರೆಸ್ನ ಕಾರ್ಯಕರ್ತರು ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: