April 25, 2024

Bhavana Tv

Its Your Channel

ಬೆಳಕೆ ಗ್ರಾಮ ಪಂಚಾಯಿತಿ ಅಕೌಂಟೆOಟ್ ಎಸಿಬಿ ವಶಕ್ಕೆ

ಭಟ್ಕಳ ; ಇ-ಸ್ವತ್ತು ನೋಂದಣಿಗೆ ಸಂಬoಧಿಸಿ ವ್ಯಕ್ತಿ ಒಬ್ಬರಿಂದ ಲಂಚ ಪಡೆಯುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯಿತಿ ಅಕೌಂಟೆoಟ್ ಒಬ್ಬರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ..

ಬೆಳಕೆ ಪಂಚಾಯಿತಿಯ ಅಣ್ಣ ನಾಯ್ಕ ಎಸಿಬಿ ದಾಳಿಗೆ ಒಳಗಾದ ಸಿಬ್ಬಂದಿ. ಈತ ಕಳೆದ ೧೫ ದಿನಗಳ ಹಿಂದೆ ಇ -ಸ್ವತ್ತು ನೋಂದಣಿಗಾಗಿ ಆಗಮಿಸಿದ ಬೆಳಕೆ ನಿವಾಸಿ ದೇವಿದಾಸ ನಾಯ್ಕ ಅವರ ಬಳಿ ೫ಸಾವಿರ ಲಂಚದ ಬೇಡಿಕೆ ಇಟ್ಟಿದ್ದ. ಈ ಕರೆಯನ್ನು ರೆಕಾರ್ಡ ಮಾಡಿಕೊಂಡ ದೇವಿದಾಸ ನಾಯ್ಕ ಕಾರವಾರದ ಎಸಿಬಿ ಕಚೇರಿಗೆ ದೂರು ಸಲ್ಲಿಸಿ ಕರೆಯ ರೇಕಾರ್ಡ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬoದಿಸಿ ಗುರುವಾರ ಇ-ಸ್ವತ್ತು ನೋಂದಣಿಯ ೧೧೧೦೦ ರೂಗಳು ಹಾಗೂ ಲಂಚದ ಬೇಡಿಕೆ ಇಟ್ಟ ೫೦೦೦ ರೂ ಸೇರಿ ಒಟ್ಟು ೧೬೧೦೦ರೂಗಳನ್ನು ನೀಡುವಾಗ ಬೆಳಕೆ ಪಂಚಾಯಿತಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅಣ್ಣ ನಾಯ್ಕ ಇವರನ್ನು ವಶಕ್ಕೆ ಪಡೆದಿದ್ದಾರೆ. ಎಸಿಬಿ ಡಿವೈಎಸ್ಪಿ ಶ್ರೀಕಾಂತ ಕೆ. ನೇತೃತ್ವದ ತಂಡ ದಾಳಿ ನಡೆಸಿ ದಾಖಲೆಗಳನ್ನು ಪರೀಶಿಲನೆ ನಡೆಸಿ ಹೆಚ್ಚಿನ ವಿಚಾರಣೆಗಾಗಿ ಕಾರವಾರ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.

error: