April 26, 2024

Bhavana Tv

Its Your Channel

ಕೊನೆಗೂ ಪಂಜರದಲ್ಲಿ ಬಿದ್ದ ಮಂಗ

ಭಟ್ಕಳ : ಕಳೆದ ಕೆಲವು ದಿನಗಳಿಂದ ಭಟ್ಕಳ ತಾಲೂಕಿನ ಮಾವಿನಕುರ್ವೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯರು ಪಂಚಾಯಿತಿ ಸಿಬ್ಬಂದಿ ಮೇಲೆ ದಾಳಿ ನಡೆಸಿ ಭಯಬೀತಗೊಳಿಸಿದ ವಾನರನನ್ನು ಗುರುವಾರ ಬೆಳಿಗ್ಗೆ ಅರಣ್ಯ ಇಲಾಖೆ ಪಂಜರ ಇಟ್ಟು ಹಿಡಿದಿದೆ.

ಪಟ್ಟಣದ ಮಾವಿನಕುರ್ವೆಯಲ್ಲಿ ಕಳೆದ ೧೮ ದಿನಗಳಿಂದ ಕಪ್ಪು ಮೂತಿಯ ದಷ್ಟಪುಷ್ಟವಾದ ಮಂಗವೊAದು ಸ್ಥಳೀಯರಿಗೆ ಉಪಟಳ ನೀಡುತ್ತಿತ್ತು. ಸಡನ್ ಆಗಿ ಬರುವ ಈ ಮಂಗ ಮೈ ಮೇಲೆ ಬಿದ್ದರೆ ಆದರಿಸಿ ಕೊಳ್ಳುವುದೆ ಕಷ್ಟವಿತ್ತು. ಎಲ್ಲಿಂದಲು ಬಂದು ಹಠಾತ್ತನೆ ದಾಳಿ ನಡೆಸಿ ಒಡಿ ಹೋಗುತ್ತಿತ್ತು. ಮಹಿಳೆಯರು, ಮಕ್ಕಳು ವಯೋವೃದ್ಧರು ಮನೆಯ ಅಂಗಳಕ್ಕೆ ಬರಲು ಭಯಪಡುವಂತ ಸ್ಥಿತಿ ನಿರ್ಮಾಣವಾಗಿತ್ತು.. ಪಂಚಾಯಿತಿ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಬಳಿಕ ಅರಣ್ಯ ಇಲಾಖೆಗೆ ಮಂಗನನ್ನು ಹಿಡಿಯುವಂತೆ ಪಂಚಾಯಿತಿ ಪಿಡಿಒ ಮನವಿ ಮಾಡಿದ್ದರು. ಕೊನೆಗೂ ಮಂಗ ಪಂಜರದಲ್ಲಿ ಬಿದ್ದಿದೆ ಎನ್ನುವ ಸುದ್ದಿ ತಿಳಿಯುತ್ತಿರುವಂತೆ ಸ್ಥಳೀಯರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

error: