April 25, 2024

Bhavana Tv

Its Your Channel

ಕ.ರ.ವೇ ಸ್ವಾಭಿಮಾನಿ ಬಣದಿಂದ ಸಂಘಟನೆಯ ರಾಜ್ಯಾಧ್ಯಕ್ಷರ ಜನ್ಮದಿನದ ಪ್ರಯುಕ್ತ ಆಹಾರ ಕಿಟ್ ವಿತರಣೆ

ಕುಮಟಾ: ಕ.ರ.ವೇ ಸ್ವಾಭಿಮಾನಿ ಬಣದಿಂದ ಸಂಘಟನೆಯ ರಾಜ್ಯಾಧ್ಯಕ್ಷರಾದ ಪಿ.ಕೃಷ್ಣೇಗೌಡ ಅವರ ಜನ್ಮದಿನದ ಪ್ರಯುಕ್ತ ತಾಲೂಕಿನ ಸವಿತಾ ಸಮಾಜ ಹಾಗೂ ಮಡಿವಾಳ ಸಮಾಜದವರಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕ.ರ.ವೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ರಾಜು ಮಾಸ್ತಿಹಳ್ಳ ಲಾಕ್ ಡೌನ್ ನಿಂದಾಗಿ ಪ್ರತಿಯೊಬ್ಬರ ಜೀವನ ನರ‍್ವಹಣೆ ಕಷ್ಟ ಸಾದ್ಯವಾಗಿದೆ.ಈ ನಿಟ್ಟಿನಲ್ಲಿ ಕ್ಷೌರಿಕ ವೃತ್ತಿಯನ್ನು ನಂಬಿ ಜೀವನ ನಡೆಸುತ್ತಿರುವ ಸವಿತಾ ಸಮಾಜ ಬಾಂಧವರಿಗೆ ಹಾಗೂ ಮಡಿವಾಳ ಸಮಾಜದವರಿಗೆ ಸಂಘಟನೆಯಿಂದ ಸಾದ್ಯವಾದ ನೆರವು ರಾಜ್ಯಾಧ್ಯಕ್ಷರ ಅನುಮತಿಯ ಮೇರೆಗೆ ನೀಡಲಾಗುತ್ತಿದೆ ಎಂದ ಅವರು ರಾಜ್ಯದಲ್ಲಿ ಕೋವಿಡ್ ೧೯ ವಿರುದ್ದದ ಹೋರಾಟಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು .

ಈ ಸಂದರ್ಭದಲ್ಲಿಕೆ.ಎನ್.ಮಂಜು,ಸವಿತಾ ಸಮಾಜದ ನಾಗರಾಜ ಕೊಡಿಯಾ,ಮಾರುತಿ ಆನೆಗುಂಡಿ ರಾಘು ಭಂಡಾರಿ.ಅಜಿತ್.ನಾಗರಾಜ ಮುಂತಾದವರಿದ್ದರು

error: