March 28, 2024

Bhavana Tv

Its Your Channel

ಜಿಲ್ಲೆಯಲ್ಲಿ ಇಂದು ೮೮ ಹೊಸ ಕೊರೋನಾ ಪ್ರಕರಣ ಧೃಡ ೫೩ ಮಂದಿ ಗುಣಮುಖರಾಗಿ ಡಿಸ್ಚಾರ್ಜ

ಕಾರವಾರ: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲಿದ್ದು, ಇಂದು ಕೂಡಾ ೮೮ ಮಂದಿಯಲ್ಲಿ ಸೋಂಕು ಧೃಡವಾಗಿದೆ. ತಾಲೂಕವಾರು ವಿವರ ನೋಡುವುದಾದರೆ
ಕುಮಟಾದಲ್ಲಿ ೩೦, , ಶಿರಸಿಯಲ್ಲಿ ೨೩, ಭಟ್ಕಳದಲ್ಲಿ ೩, ಜೊಯಿಡಾ ೨ ಹಳಿಯಾಳದಲ್ಲಿ ೧೪, ಹೊನ್ನಾವರದಲ್ಲಿ ೪, ಮುಂಡಗೋಡ ೭, ಅಂಕೋಲಾದಲ್ಲಿ ೧, ಸಿದ್ದಾಪುರ ೪ ಪ್ರಕರಣಗಳು ದೃಢಪಟ್ಟಿವೆ.

ಅಲ್ಲದೆ ಸೋಂಕಿನಿoದ ಗುಣಮುಖರಾಗಿ ಡಿಸ್ಚಾರ್ಜ ಹೊಂದಿದ ತಾಲೂಕವಾರು ಸಂಖ್ಯೆ ನೋಡುವುದಾದರೆ, ಹಳಿಯಾಳ ೧೫, ಹೊನ್ನಾವರದಲ್ಲಿ ೫, ಕಾರವಾರ ೪, ಅಂಕೋಲಾದಲ್ಲಿ ೧೫, ಕುಮಟಾದಲ್ಲಿ ೧೨, ಶಿರಸಿ, ಸಿದ್ದಾಪುರದಲ್ಲಿ ತಲಾ ಓರ್ವ, ಒಟ್ಟು ೫೩ ಮಂದಿ ಗುಣಮುಖರಾಗಿದ್ದಾರೆ.

ಈವರೆಗೆ ಜಿಲ್ಲೆಯ ೧,೫೦೬ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ೭೫೮ ಮಂದಿ ಗುಣಮುಖರಾಗಿದ್ದಾರೆ. ೧೪ ಮಂದಿ ಸಾವನ್ನಪ್ಪಿದ್ದು, ೭೩೪ ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

error: