April 20, 2024

Bhavana Tv

Its Your Channel

ಹಳೇ ದ್ವೇಷದ ಕಾರಣಕ್ಕಾಗಿ ವ್ಯಕ್ತಿ ಮೇಲೆ ಹಲ್ಲೆ ನಡಸಿದ ೨೦ಕ್ಕೂ ಅಧಿಕ ಜನರ ಗುಂಪು; ಚಿಕಿತ್ಸೆ ಫಲಕಾರಿಯಾಗದೇ ಸಾವು, ಪೋಲಿಸರಿಂದ ಮುಂದುವರೆದ ತನಿಖೆ.

ಭಟ್ಕಳ: ತಾಲೂಕಿನ ಬೆಣಂದೂರು ಗ್ರಾಮದಲ್ಲಿ ವ್ಯಕ್ತಿಯೋರ್ವನನ್ನು ಹಳೆ ದ್ವೇಷಕ್ಕಾಗಿ ಕೊಲೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಕೊಲೆಯಾದ ವ್ಯಕ್ತಿ ವ್ಯಕ್ತಿ ಪದ್ಮಯ್ಯ ಜಟ್ಟಪ್ಪ ನಾಯ್ಕ (೪೪) ಎಂದು ತಿಳಿದು ಬಂದಿದೆ.
ಮದ್ಯಾಹ್ನ ೩.೩೦ ರ ಸುಮಾರಿಗೆ ಶಿರೂರಿನಲ್ಲಿರುವ ಹಾಲಿನ ಡೈರಿಗೆ ಹಾಲು ನೀಡಿ ಬರುವ ಸಂದರ್ಭದಲ್ಲಿ
ಅoದಾಜು ೨೦ ರಿಂದ ೨೨ ಜನ ವ್ಯಕ್ತಿ ಗಳು ಸೇರಿ ಕೊಲೆ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿದೆ.

ಮೂಲ ಹಳೆ ದ್ವೇಷಕ್ಕಾಗಿ ಬಿತ್ತಾ ಹೆಣಾ ?

ಈ ಹಿಂದೆ ಜಮೀನ ವಿಚಾರಕ್ಕಾಗಿ ಕೊಲೆಯಾದ ವ್ಯಕ್ತಿಯ ಹಾಗೂ ಇನ್ನೊಂದು ಗುಂಪಿಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ೫ /೭/೨೦೨೦ ರಲ್ಲಿ ಪ್ರಕರಣ ದಾಖಲಾಗಿದ್ದು, ಇದೇ ಕಾರಣಕ್ಕಾಗಿಯೇ ಈ ಘಟನೆ ಸಂಭವಿಸಿದೆಯಾ ಅನುಮಾನ ಮೂಡುತ್ತಿದೆ.
ತಾಲೂಕಾಸ್ಪತ್ರೆಗೆ ಎಎಸ್ಪಿ ನಿಖೀಲ.ಬಿ ಭೇಟಿ ಕೊಲೆಯಾದ ವ್ಯಕ್ತಿಯ ಸಹೋದರನ ಹೇಳಿಕೆ ಪಡೆದುಕೊಂದಿದ್ದಾರೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

error: