April 19, 2024

Bhavana Tv

Its Your Channel

ಸೋಡಿಗದ್ದೆ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ದಲ್ಲಿ ನಡೆದ ೨ನೇ ವರ್ಷದ ವರ್ಧಂತಿ ಉತ್ಸವ

ಭಟ್ಕಳ:ತಾಲ್ಲೂಕಿನ ಸೋಡಿಗದ್ದೆ ಕ್ರಾಸ್ ಬಳಿಯಲ್ಲಿ ಇರುವ
ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ದಲ್ಲಿ ೨ನೇ ವರ್ಷದ ವರ್ಧಂತಿ ಉತ್ಸವ ಶನಿವಾರ ನಡೆಯಿತು.
ಮಂಜುನಾಥ ಗುರುಸ್ವಾಮಿ ನೇತೃತ್ವದಲ್ಲಿ ಭಗವಂತನ ಸನ್ನಿಧಿಯಲ್ಲಿ ಬೆಳಗ್ಗೆ ಇಂದ ದೇವತ ಕಾರ್ಯ ಆರಂಭವಾಗಿ ಕುಂಬಾಭಿಷೇಕ,ನಡೆದು ನಂತರ ಮಧ್ಯಾಹ್ನ ಮಾಹಾಪೂಜೆ ನಡೆಯಿತು.ಮಹಾಪೂಜೆ ನಂತರ ಮಹಾ ಅನ್ನ ಸಂತರ್ಪಣೆಯಲ್ಲಿ ನೇರವೇರಿದ್ದು,ನಂತರ ತಾಲೂಕಿನ ಪ್ರಮುಖರು ನೆರೆದ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟರು. ನೂರಾರು ಭಕ್ತರು ಬಂದು ದೇವರ ಕೃಪೆಗೆ
ಪಾತ್ರರಾದರು.ಕೆಲವರು ಅನ್ನದಾನಕ್ಕೆ ವಸ್ತು,ಹಾಗೂ ಹಣದ ರೂಪದಲ್ಲಿ ದೇಣೆಗೆ ನೀಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ,ಯಲ್ವಡಿಕವೂರ ಪಂಚಾತಯತ ಅಧ್ಯಕ್ಷರಾದಲಕ್ಷಿ ನಾರಾಯಣ ನಾಯ್ಕ ತಾಲ್ಲೂಕು ಪಂಚಾಯತ ಸದಸ್ಯ ಹನುಮಂತ ನಾಯ್ಕ,ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ ಮುಂತಾದವರು ಪಾಲ್ಗೊಂಡರು

error: