March 29, 2024

Bhavana Tv

Its Your Channel

ಮಾಜಿ ಶಾಸಕ ಮಂಕಾಳ ವೈದ್ಯ ಅವರ ಮನೆಗೆ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಭೇಟಿ

ಭಟ್ಕಳ: ಮಾಜಿ ಶಾಸಕ ಮಂಕಾಳ ವೈದ್ಯ ಅವರ ಮನೆಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ೭೨ನೇ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಭೇಟಿ ನೀಡಿ ಪಾದಪೂಜೆ ಸ್ವೀಕರಿಸಿ ಆಶೀರ್ವದಿಸಿದರು.
ತಾಲೂಕಿನ ಮುರ್ಡೆಶ್ವರದಲ್ಲಿರುವ ಮಾಜಿ ಶಾಸಕ ಮಂಕಾಳ ವೈದ್ಯ ಅವರ ವಿನಂತಿ ಮೇರೆಗೆ ಮನೆಗೆ ಆಗಮಿಸಿ ಪಾದಪೂಜೆ ಸ್ವೀಕರಿಸಿದರು. ಮಂಕಾಳ ವೈದ್ಯ ಪತ್ನಿ ಪುಷ್ಪಲತಾ ವೈದ್ಯ, ಮಕ್ಕಳಾದ ಬೀನಾ, ಸೋನಾಲಿ ಸ್ವಾಮೀಜಿಯವರಿಗೆ ಪೂಜೆ ಸಲ್ಲಿಸಿದರು.

ಜೊತೆಗೆ ಶಾಖಾ ಮಠದ ಶ್ರೀಗಳಾದ ಧರ್ಮಪಾಲನಾಥ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮತ್ತು ಶ್ರೀ ಶ್ರೀ ಶೈಲನಾಥ ಸ್ವಾಮೀಜಿಯವರು ವೈದ್ಯರ ಕುಟುಂಬದವರಿAದ ಪಾದ ಪೂಜೆ ಸ್ವೀಕರಿಸಿ ಹರಸಿದರು. ನಂತರ ಶ್ರೀಗಳನ್ನು ಕುಮಟಾದಲ್ಲಿ ನೂತನವಾಗಿ ನಿರ್ಮಾಣಗೊಂಡ ಒಕ್ಕಲಿಗ ಸಭಾಭವನವನ್ನು ಲೊಕಾರ್ಪಣೆಗೊಳಿಸಲು ಮುಂದಿನ ಕಾರ್ಯಕ್ರಮಕ್ಕೆ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಸದಸ್ಯರಾದ ಸಿಂಧೂ ಭಾಸ್ಕರ ನಾಯ್ಕ, ಅಲ್ಬರ್ಟ್ ಡಿಕೋಸ್ತಾ, ತಾ.ಪಂ ಅಧ್ಯಕ್ಷ ಈಶ್ವರ ನಾಯ್ಕ, ಎಪಿಎಂಸಿ ಅಧ್ಯಕ್ಷ ಗೋಪಾಲ ನಾಯ್ಕ, ಬೆಳಕೆ ಜಿ.ವಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ನಾಯ್ಕ, ಹೊನ್ನಾವರದ ಒಕ್ಕಲಿಗ ಸಮಾಜದ ಬಾಲಕೃಷ್ಣ ನಾಯ್ಕ, ಮಂಕಾಳ ವೈದ್ಯರ ಕುಟುಂಬದ ಸದಸ್ಯರು, ನೂರಾರು ಸಂಖ್ಯೆಯ ಭಕ್ತರು ಸರತಿಯಲ್ಲಿ ನಿಂತು ಶ್ರೀಗಳ ದರ್ಶನ ಪಡೆದರು

error: