ಭಟ್ಕಳ: ತಾಲ್ಲೂಕಿನ ಕಾರಗದ್ದೆಯ ಮಹ್ಮದ್ ಇಸ್ಮಾಯಿಲ್ ಅವರ ದುಬಾರಿ ಕೈಗಡಿಯಾರವನ್ನು ಒಡೆದ ಪ್ರಕರಣದಲ್ಲಿ, ವಿಮಾನ ನಿಲ್ದಾಣದ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಕೇರಳದ ಕಲ್ಲಿಕೋಟೆ ನ್ಯಾಯಾಲಯವು ಅಲ್ಲಿನ ಪೊಲೀಸರಿಗೆ ಸೂಚಿಸಿದೆ.
ಮಾರ್ಚ್ 3ರಂದು ದುಬೈನಿಂದ ಬಂದಿದ್ದ ಇಸ್ಮಾಯಿಲ್ ಅವರ ₹ 48 ಲಕ್ಷ ಮೌಲ್ಯದ ಕೈಗಡಿಯಾರವನ್ನು ಸೀಮಾ ಸುಂಕ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದರು. ಅಕ್ರಮವಾಗಿ ಚಿನ್ನ ಸಾಗಣೆ ಸಂಬಂಧ ಪರಿಶೀಲಿಸಿದ ಬಳಿಕ, ಕೈಗಡಿಯಾರವನ್ನು ಒಡೆದ ಸ್ಥಿತಿಯಲ್ಲಿ ಮರಳಿಸಿದ್ದರು.
ಈ ಸಂಬಂಧ ಅವರು ಕಲ್ಲಿಕೋಟೆ ಪೊಲೀಸರಿಗೆ ದೂರು ನೀಡಿದ್ದರು. ಅದರ ವಿಚಾರಣೆಯು ಅಲ್ಲಿನ ನ್ಯಾಯಾಲಯದಲ್ಲಿ ಸೋಮವಾರ ನಡೆಯಿತು.
More Stories
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ