March 29, 2024

Bhavana Tv

Its Your Channel

ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಪರಿಶೀಲಿಸಲು ಕೋರ್ಟ್‌ ಸೂಚನೆ

ಭಟ್ಕಳ: ತಾಲ್ಲೂಕಿನ ಕಾರಗದ್ದೆಯ ಮಹ್ಮದ್ ಇಸ್ಮಾಯಿಲ್ ಅವರ ದುಬಾರಿ ಕೈಗಡಿಯಾರವನ್ನು ಒಡೆದ ಪ್ರಕರಣದಲ್ಲಿ, ವಿಮಾನ ನಿಲ್ದಾಣದ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಕೇರಳದ ಕಲ್ಲಿಕೋಟೆ ನ್ಯಾಯಾಲಯವು ಅಲ್ಲಿನ ಪೊಲೀಸರಿಗೆ ಸೂಚಿಸಿದೆ.
ಮಾರ್ಚ್ 3ರಂದು ದುಬೈನಿಂದ ಬಂದಿದ್ದ ಇಸ್ಮಾಯಿಲ್ ಅವರ ₹ 48 ಲಕ್ಷ ಮೌಲ್ಯದ ಕೈಗಡಿಯಾರವನ್ನು ಸೀಮಾ ಸುಂಕ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದರು. ಅಕ್ರಮವಾಗಿ ಚಿನ್ನ ಸಾಗಣೆ ಸಂಬಂಧ ಪರಿಶೀಲಿಸಿದ ಬಳಿಕ, ಕೈಗಡಿಯಾರವನ್ನು ಒಡೆದ ಸ್ಥಿತಿಯಲ್ಲಿ ಮರಳಿಸಿದ್ದರು.
ಈ ಸಂಬಂಧ ಅವರು ಕಲ್ಲಿಕೋಟೆ ಪೊಲೀಸರಿಗೆ ದೂರು ನೀಡಿದ್ದರು. ಅದರ ವಿಚಾರಣೆಯು ಅಲ್ಲಿನ ನ್ಯಾಯಾಲಯದಲ್ಲಿ ಸೋಮವಾರ ನಡೆಯಿತು.

error: