April 13, 2024

Bhavana Tv

Its Your Channel

ಗೇರುಸೊಪ್ಪ ವಲಯ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸುಗಮಗೊಳಿಸಲು ಕ್ರಮ ಕೈಗೊಳ್ಳಬೇಕು – ಅಳ್ಳಂಕಿಯ ಸಮಾಜ ಸೇವಾ ಬಳಗ

ಹೊನ್ನಾವರ: ಹೆಸ್ಕಾಂಗೆ ಸಂಭoದಪಟ್ಟ ಗೇರುಸೊಪ್ಪ ವಲಯ ವ್ಯಾಪ್ತಿಯಲ್ಲಿ ಜನರು ಪ್ರತಿ ನಿತ್ಯ ವಿದ್ಯುತ್ ಅವ್ಯವಸ್ಥೆಯಿಂದಾಗಿ ಹೇಳತೀರದ ಬವಣೆ ಪಡುತ್ತಿದ್ದಾರೆ. ರೈತರಿಗೆ ೩ಫೇಸ್ ವಿದ್ಯುತ್ ಕನಸಿನ ಮಾತಾಗಿದೆ .ಗ್ರಹ ಬಳಕೆ ವಿದ್ಯುತ್ ಅವ್ಯವಸ್ಥೆಯ ಆಗರವಾಗಿದೆ.ದೀಪದ ಬುಡದಲ್ಲಿ ಕತ್ತಲೆ ಎನ್ನುವಂತೆ ನಾಡಿಗೇ ಜಲವಿದ್ಯುತ್ ಯೋಜನೆ ನೀಡಿದರೂ ಶರಾವತಿ ನದಿ ಪಾತ್ರದ ಜನರು ಕತ್ತಲೆಯಲ್ಲಿ ದಿನ ದೂಡುವಂತಾದದ್ದು ವಿಪರ್ಯಾಸವೇ ಸರಿ. ಇಲ್ಲಿಯ ಜನರು ಹೆಸ್ಕಾಂ ಕಛೇರಿಯನ್ನು ಸಂಪರ್ಕಿಸಿದರೆ ಹೆಚ್ಚಿನ ಸಂದರ್ಭದಲ್ಲಿ ಅಲ್ಲಿನ ದೂರವಾಣಿಯ ಸಂಪರ್ಕಸಿಗದoತೆ ಎತ್ತಿಡುವ ಹೊಸವಿಧಾನವನ್ನು ಹೆಸ್ಕಾಂನವರು ಕಂಡುಕೊoಡಿದ್ದಾರೆ. ಒಂದುವೇಳೆ ಮೊಬೈಲ ದೂರವಾಣಿಯಲ್ಲಿ ಸಂಪರ್ಕ ಸಾಧ್ಯವಾದರೆ ಮೇನ್ ಲೈನ್ ಫಾಲ್ಟ್ ಎನ್ನುವ ಸಿದ್ಧ ಉತ್ತರವಂತೂ ಖಂಡಿತಾ ದೊರೆಯುತ್ತದೆ. ಗೇರುಸೊಪ್ಪ ಹೆಸ್ಕಾಂ ವಲಯದ ಶರಾವತಿ ಬಲದಂಡೆ ಪ್ರದೇಶ (ಗೇರುಸೊಪ್ಪದಿಂದ ಉಪ್ಪೋಣಿ, ಹೆರಂಗಡಿ, ಅಳ್ಳಂಕಿ,ಮೂಡ್ಕಣಿ,ಜಲವಳ್ಳಿ ವರೆಗೆ) ವಾಪ್ತಿಯಲ್ಲಿ ವಿದ್ಯುತ್ ಅವ್ಯವಸ್ಥೆ ಹೇಳತೀರದಷ್ಟಿದ್ದು ಇದನ್ನು ಸರಿಪಡಿಸಲು ಹೆಸ್ಕಾಂ ಇಚ್ಛಾಶಕ್ತಿಯನ್ನು ತೋರಿಸುತ್ತಿಲ್ಲ. ಈ ಭಾಗದ ಈ ಪ್ರಮುಖ ಸಮಸ್ಯೆಯನ್ನು ಬಗೆಹರಿಸಲು ಜನಪ್ರತಿನಿಧಿಗಳಿಗೆ ಪುರಸೊತ್ತು ಆಗಿಲ್ಲವೋ ಅಥವಾ ಅವರ ಗಮನಕ್ಕೆ ಬಂದಿಲ್ಲವೋ ಎನ್ನುವ ಜಿಜ್ಞಾಸೆಯಲ್ಲಿರುವ ಜನರು ಹೆಸ್ಕಾಂ ವಿರುದ್ಧ ಹೋರಾಟಕ್ಕೆ ಇಳಿಯುವ ಚಿಂತನೆ ಮಾಡುತ್ತಿದ್ದಾರೆ.ಸಾರ್ವಜನಿಕ ಹಿತಾಸಕ್ತಿಯ ಈ ವಿಚಾರದಲ್ಲಿ ಹೆಸ್ಕಾಂ ಕೂಡಲೇ ಮಧ್ಯ ಪ್ರವೇಶಿಸಿ ಈ ಭಾಗದ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸುಗಮಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅಳ್ಳಂಕಿಯ ಸಮಾಜ ಸೇವಾ ಬಳಗ ಈ ಮೂಲಕ ಆಗ್ರಹ ಪಡಿಸುತ್ತದೆ.
ಚಂದ್ರಕಾoತ ಕೊಚರೇಕರ-
ಸ್ಪಂದನ ಸಮಾಜ ಸೇವಾ ಬಳಗ ಅಳ್ಳಂಕಿ ಹೊನ್ನಾವರ.

error: