ಭಟ್ಕಳ : ತಾಲೂಕಿನ ಇಸ್ಲಾಮ್ ಧರ್ಮೀಯರ ನೂತನ ಖಾಜಿಯಾಗಿ ಅಬ್ದುರೂಬ್ ಖತೀಬಿ ನದ್ವಿ ಇವರನ್ನು ನೇಮಕಗೊಳಿಸಲಾಗಿದೆ.
ಭಟ್ಕಳ ತಾಲೂಕಿನ ಜಾಮೀಯಾ ಮದರಸಾದಲ್ಲಿ ೧೫ ವರ್ಷ ಹಾಗೂ ಲಕ್ನೋ ದಾರುಲ್ ಉಲೂಮ್ನಲ್ಲಿ ೨ ವರ್ಷ ಅಧ್ಯಯನ ಮಾಡಿರುವ ಅಬ್ದುರಬ್, ಪ್ರಸ್ತುತ ಜಾಮೀಯಾ ಇಸ್ಲಾಮಿಯಾದಲ್ಲಿ ಕಳೆದ ೩೦ ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೂತನ ಖಾಜಿ ಆಯ್ಕೆಗೆ ಸಂಬAಧಿಸಿದAತೆ ಶುಕ್ರವಾರ ತಾಲೂಕಿನ ಜಾಮೀಯಾ ಮಸೀದಿ (ಚಿನ್ನದ ಫಳ್ಳಿ) ಯಲ್ಲಿ ನಡೆದ ಸಭೆಯಲ್ಲಿ ಜಮಾತ್ ಉಲ್ ಮುಸ್ಲಿಮೀನ್ ಅಧ್ಯಕ್ಷ ಜಾನ್ ಅಬ್ಬುಗ್ರೆಹಮಾನ್ ನೂತನ ಖಾಜಿ ನೇಮಕವನ್ನು ಪ್ರಕಟಿಸಿದರು. ಸಭೆಯಲ್ಲಿ ಜಮಾತ್ ಉಲ್ ಮುಸ್ಲಿಮೀನ್ ಸಂಘಟನೆ ಕಾರ್ಯದರ್ಶಿ ಮೌಲಾನಾ ತಲ್ಲಾ ನದ್ವಿ, ಜಾಮೀಯಾ ಮಸೀದಿ ಇಮಾಮ್ ಅಬ್ದುಲ್ ಅಲೀಮ್ ನದ್ವಿ ಉಪಸ್ಥಿತರಿದ್ದರು.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.