April 23, 2024

Bhavana Tv

Its Your Channel

ಆನಂದ ಅಸ್ನೋಟಿಕರ್ ವಿರುದ್ಧ ಮುಗಿಬಿದ್ದ ಭಟ್ಕಳ ಬಿಜೆಪಿ, ಮಾನಸಿಕ ಅಸ್ವಸ್ಥ ಎಂದು ಜರಿದ ಶಾಸಕ ಸುನೀಲ್ ನಾಯ್ಕ

ಭಟ್ಕಳ: ಸಂಸದ ಅನಂತಕುಮಾರ ಹೆಗಡೆ ವಿರುದ್ಧ ನಾಲಿಗೆ ಹರಿಬಿಟ್ಟಿರುವ ಆನಂದ ಅಸ್ನೋಟಿಕರ್ ತನ್ನ ೪ ಲಕ್ಷಕ್ಕೂ ಹೆಚ್ಚು ಮತ ಪಡೆದು ಅನಂತಕುಮಾರ ಗೆದ್ದಾಗಲೇ ಅವರ ಯೋಗ್ಯತೆ ಏನು ಎನ್ನುವುದನ್ನು ತಿಳಿದುಕೊಳ್ಳಬೇಕಿತ್ತು, ಸಂಸದರ ವಿರುದ್ಧ ಇಲ್ಲಸಲ್ಲದ ಮಾತುಗಳನ್ನು ಆಡಿರುವ ಆನಂದ, ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದು ಒಳಿತು ಎಂದು ಶಾಸಕ ಸುನಿಲ್ ನಾಯ್ಕ ಆರೋಪಿಸಿದ್ದಾರೆ.
ಅವರು ಮಂಗಳವಾರ ಸಂಜೆ ಭಟ್ಕಳ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸಂಸದ ಅನಂತಕುಮಾರ ೩೦- ೪೦ ವರ್ಷದಿಂದ ರಾಜಕಾರಣದಲ್ಲಿ ಇದ್ದು, ಒಂದೇ ಒಂದು ಕಪ್ಪು ಚುಕ್ಕೆಯನ್ನೂ ಹೊಂದಿಲ್ಲ. ಆನಂದ ಅಸ್ನೋಟಿಕರ್ ಸತತ ೨ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದು, ಇಲ್ಲಸಲ್ಲದ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಬಿಜೆಪಿ ಕಾರ್ಯಕರ್ತಲೇ ನಿಮ್ಮನ್ನು ಆಸ್ಪತ್ರೆಗೆ ಸೇರಿಸುತ್ತಾರೆ ಎಂದು ಹೇಳಿದರು,
ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷ ಸುಬ್ರಾಯ ದೇವಾಡಿಗ ಮಾತನಾಡಿ, ಅನಂತಕುಮಾರ ಹೆಗಡೆ ೬ ಬಾರಿ ಸಂಸದರಾಗಿದ್ದಾರೆ, ಕಳೆದ ೨೦೧೮ ರಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದೇ ಅನ್ಯ ಪಕ್ಷದಿಂದ ಸ್ಪರ್ಧಿಸಿ ಸೋತ ಆನಂದ, ಲೋಕಸಭಾ ಚುನಾವಣೆಯಲ್ಲಿಯೂ ಪರಾಭವಗೊಂಡ ನಂತರ ಹತಾಶರಾಗಿದ್ದಾರೆ. ಅವರು ಅಂದಿನಿAದ ಇಂದಿನವರೆಗೂ ಆನಂತಕುಮಾರರನ್ನು ಟೀಕಿಸುತ್ತ ಬಂದಿದ್ದು ಅನಂತಕುಮಾರ ವಿರುದ್ಧದ ಆನಂದ ಹೇಳಿಕೆಯನ್ನು ಭಟ್ಕಳ ಬಿಜೆಪಿ ಖಂಡಿಸುತ್ತದೆ ಎಂದು ವಿವರಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತಾರಾಮ.ಭಟ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮೋಹನ ನಾಯ್ಕ, ಭಾಸ್ಕರ ದೈಮನೆ, ರಾಜೇಶ ನಾಯ್ಕ ಮುಂಡಳ್ಳಿ, ದಿನೇಶ ನಾಯ್ಕ, ವೆಂಕಟೇಶ ನಾಯ್ಕ, ಪ್ರಮೋದ ಜೋಶಿ, ಈಶ್ವರ ದೊಡ್ಡನೆ, ಪದ್ಮಯ್ಯ ನಾಯ್ಕ, ಈಶ್ವರ ನಾಯ್ಕ ಬೈಲೂರು, ದಾಸ ನಾಯ್ಕ ತಲಗೋಡು, ಮಹೇಂದ್ರ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

error: