April 24, 2024

Bhavana Tv

Its Your Channel

ಎಂ. ಪಿ. ಕರ್ಕಿಯವರ ನಿಧನಕ್ಕೆ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು ಸಂತಾಪ

ಧರ್ಮಸ್ಥಳ: ಎಂ. ಪಿ. ಕರ್ಕಿಯವರ ನಿಧನ ವಾರ್ತೆ ತಿಳಿದು ವಿಷಾದವಾಯಿತು. ಅವರು ಕಳೆದ ೫೦ ವರ್ಷಗಳಲ್ಲಿ ಸಮಾಜ ಸೇವೆ, ವೈದ್ಯಕೀಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸೇವೆ ಮಾಡಿದವರು. ಹಿಂದುಳಿದ ಪ್ರದೇಶವಾಗಿದ್ದ ಹೊನ್ನಾವರದಲ್ಲಿ ೧೯೭೦ ಇಸವಿಯ ಸುಮಾರಿಗೆ ಪ್ರಗತಿ ಸಾಧಿಸಲು ಅವರು ಪಟ್ಟ ಶ್ರಮವನ್ನು ನಾನು ಕಂಡಿದ್ದೇನೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದ ಆ ಪ್ರದೇಶದಲ್ಲಿ ಇಂದು ಸಾಧಿಸಲ್ಪಟ್ಟ ಪ್ರಗತಿಗೆ ಡಾ. ಕರ್ಕಿ ಅವರ ಕೊಡುಗೆ ಅಪಾರ. ಅವರ ಜೀವನೋತ್ಸಾಹ ಅದ್ವಿತೀಯ ಮತ್ತು ಅನುಕರಣೀಯವಾದದು. ನಿಜವಾದ ಅರ್ಥದಲ್ಲಿ ಹೊನ್ನಾವರ ಜಿಲ್ಲೆ ಮತ್ತು ಕರ್ನಾಟಕಕ್ಕೆ ಅವರ ನಿಧನದಿಂದ ಅಪಾರ ನಷ್ಟವಾಗಿದೆ.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಅಗಲುವಿಕೆಯಿಂದ ಕುಟುಂಬ ವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ.

error: