ಮಂಗಳೂರು; ಮಂಗಳೂರಿನ ವ್ಯಕ್ತಿಯೊಬ್ಬರು ಅಪರಿಚಿತ ವ್ಯಕ್ತಿಯ ಮಾತು ನಂಬಿ ತಮ್ಮ ಮೊಬೈಲ್ ಗೆ Any Desk App ಇನ್ಸ್ಟಾಲ್ ಮಾಡಿಸಿಕೊಂಡು ರೂ ೯೯,೯೦೦ ಕಳೆದುಕೊಂಡಿದ್ದಾರೆ.
ಈ ವ್ಯಕ್ತಿಗೆ ಜೂನ್ ೧ ರಂದು ಬೆಳಿಗ್ಗೆ ೧೦ ಗಂಟೆಗೆ ೭೯೦೮೨೫೬೨೭೨ ನೇ ನಂಬ್ರದಿoದ ಕರೆ ಬಂದಿದ್ದು ಪೋನಿನಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ತಾನು ಬಿ.ಎಸ್.ಎನ್.ಎಲ್ ಕಛೇರಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿ ಮೊಬೈಲ್ ರೀಚಾರ್ಜ್ ಅಪ್ ಡೇಟ್ ಮಾಡುವರೇ Any Desk App ನ್ನು ಡೌನ್ ಲೋಡ್ ಮಾಡಲು ತಿಳಿಸಿದ್ದನು.
ಅದರಂತೆ Any Desk App ನ್ನು ಡೌನ್ ಲೋಡ್ ಮಾಡಿದಾಗ ವೆಬ್ ಪೇಜೊಂದು ಓಪನ್ ಆಗಿದ್ದು ಕರೆ ಮಾಡಿದ ವ್ಯಕ್ತಿಯು ಅದರಲ್ಲಿ ಮೊಬೈಲ್ ರೀಚಾರ್ಜ್ ಮಾಡಲು ಬ್ಯಾಂಕ್ ಕಾರ್ಡ್ ನ CVV ನಂಬ್ರವನ್ನು ಹಾಕಲು ತಿಳಿಸಿದ್ದು ಅದರಂತೆ ಇವರು CVV ನಂಬ್ರವನ್ನು ಹಾಕಿದ್ದಾರೆ. ಇದಾದ ಕೂಡಲೇ ಇವರ ಬ್ಯಾಂಕ್ ಖಾತೆಯಿಂದ ರೂ.೯೯,೯೦೦/- ವರ್ಗಾವಣೆಗೊಂಡಿರುತ್ತದೆ.
ಈ ರೀತಿಯಾಗಿ ಬಿ.ಎಸ್.ಎನ್.ಎಲ್ ಕಛೇರಿಯಿಂದ ಕರೆ ಮಾಡುವುದಾಗಿ ತಿಳಿಸಿ ಈ ವ್ಯಕ್ತಿ ಗೆ ಮೊಬೈಲ್ ರೀಚಾರ್ಜ್ ಮಾಡುವಂತೆ ತಿಳಿಸಿ ಬ್ಯಾಂಕ್ ಖಾತೆ ಸಂಖ್ಯೆ ಯಿಂದ ತನ್ನ ಖಾತೆಗೆ ರೂ.೯೯,೯೦೦/- ವನ್ನು ವರ್ಗಾಯಿಸಿರುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಇದೀಗ ಪ್ರಕರಣ ದಾಖಲಿಸಿದ್ದಾರೆ.
More Stories
ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಭಕ್ತಿ ಸಂಗೀತ
ಶ್ರೀ ಚಿತ್ರಾಪುರ ಮಠ,ಶಿರಾಲಿ ಪರಮಪೂಜ್ಯ ಗುರುಗಳ ಆಶೀರ್ವಾದದೊಂದಿಗೆ ದತ್ತ ಜಯಂತಿ
ವಿಜೃಂಭಣೆಯಿoದ ನಡೆದ ಶ್ರೀ ಶಾರದಾ ಶತಮಾನೋತ್ಸವ