ಮಂಗಳೂರು: ಚೀನಾದಿಂದ ಸಿರಿಯಾಕ್ಕೆ ತೆರಳುತ್ತಿದ್ದ ಹಡಗು ಅರಬ್ಬಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದು, ಅದರಲ್ಲಿದ್ದ 15 ಮಂದಿ ಸಿಬ್ಬಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಪಡೆ ರಕ್ಷಣೆ ಮಾಡಿದೆ.
ಮಂಗಳೂರಿನಿAದ 5.6 ನಾಟಿಕಲ್ ದೂರದಲ್ಲಿ ಸಮುದ್ರ ಮಧ್ಯೆ ಹಡಗು ಅಪಾಯಕ್ಕೀಡಾಗಿದೆ. ಸಿರಿಯಾ ದೇಶದ ಎಂವಿ ಪ್ರಿನ್ಸೆಸ್ ಮೈರಲ್ ಎನ್ನುವ ಹೆಸರಿನ ಹಡಗು ಅಪಘಾತಕ್ಕೀಡಾಗಿದೆ. ಹಡಗಿಗೆ ಅಡಿಭಾಗದಲ್ಲಿ ತೂತು ಬಿದ್ದು ನೀರು ಒಳಹೊಕ್ಕಿದೆ ಎನ್ನಲಾಗುತ್ತಿದ್ದು, ಕೂಡಲೇ ರೇಡಿಯೋ ಸಂದೇಶ ಮೂಲಕ ಅದರಲ್ಲಿದ್ದ ಸಿಬ್ಬಂದಿ ರಕ್ಷಣೆಗೆ ಮೊರೆ ಇಟ್ಟಿದ್ದಾರೆ. ಇದರಿಂದ ಸಮುದ್ರದಲ್ಲಿ ಗಸ್ತಿನಲ್ಲಿದ್ದ ಕೋಸ್ಟ್ ಗಾರ್ಡ್ ಪಡೆ ಅಲ್ಲಿಗೆ ಧಾವಿಸಿದ್ದು, ಅದರಲ್ಲಿದ್ದ ಸಿಬ್ಬಂದಿಯನ್ನು ರಕ್ಷಣೆ ಮಾಡಿದೆ. ಚೀನಾದಿಂದ ಎಂಟು ಸಾವಿರ ಟನ್ ಕಲ್ಲಿದ್ದಲು ಅದಿರನ್ನು ಹೊತ್ತುಕೊಂಡು ಹಡಗು ಸಿರಿಯಾಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಹಡಗನ್ನು ಎಳೆದು ದಡಕ್ಕೆ ತರುವ ಪ್ರಯತ್ನ ನಡೆದಿದೆ. ಆದರೆ, ಕರಾವಳಿಯಲ್ಲಿ ಮಳೆ, ಗಾಳಿ ಇರುವುದರಿಂದ ಎಳೆದು ತರುವ ಪ್ರಯತ್ನ ಸಾಧ್ಯವಾಗಿಲ್ಲ. ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಮಂಗಳೂರಿಗೆ ಕರೆತರಲಾಗಿದೆ.
More Stories
ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಭಕ್ತಿ ಸಂಗೀತ
ಶ್ರೀ ಚಿತ್ರಾಪುರ ಮಠ,ಶಿರಾಲಿ ಪರಮಪೂಜ್ಯ ಗುರುಗಳ ಆಶೀರ್ವಾದದೊಂದಿಗೆ ದತ್ತ ಜಯಂತಿ
ವಿಜೃಂಭಣೆಯಿoದ ನಡೆದ ಶ್ರೀ ಶಾರದಾ ಶತಮಾನೋತ್ಸವ