April 19, 2024

Bhavana Tv

Its Your Channel

ಪ್ರವೀಣ್ ನೆಟ್ಟಾರ್ ಕೊಲೆಯ ಬಗ್ಗೆ ಬ್ರಹ್ಮಾನಂದ ಶ್ರೀಗಳಿಂದ ಖಂಡನೆ

ಕನ್ಯಾಡಿ : ಪ್ರವೀಣ್ ನೆಟ್ಟಾರ್ ಇವರ ಬರ್ಬರ ಕೊಲೆಯನ್ನು ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಖಂಡಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನಬದ್ಧವಾದ ರಾಜ್ಯಾಂಗಗಳು ಸಮರ್ಥವಾಗಿ ಕಠೋರವಾಗಿ ನಿರ್ಣಯಗಳನ್ನು ತೆಗೆದುಕೊಂಡಾಗ ಇಂತಹ ದುಷ್ಕೃತ್ಯಗಳು ನಡೆಯುವುದಿಲ್ಲ. ಯಾವುದೇ ಪಕ್ಷದ ಸರ್ಕಾರಗಳು ನುಡಿದಂತೆ ನಡೆಯದಿದ್ದಾಗ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತದೆ ಇವತ್ತು ಸರಕಾರಗಳು ಅಥವಾ ಸಂಘ ಸಂಸ್ಥೆಗಳು ಅವರಿಗೆ
ಪರಿಹಾರವನ್ನೇನೋ ಘೋಷಿಸಬಹುದು ಆದರೆ ಅವನ ಕುಟುಂಬಕ್ಕೆ ಆದ ನಷ್ಟ ಅಂದ್ರೆ ಅವನ ಹೆಂಡತಿ ಮಕ್ಕಳು ತಂದೆ ತಾಯಿ ಈ ಘಟನೆಯ ದುಃಖವನ್ನು ಜೀವನಪರ್ಯಂತ ಮರೆಯಲಾಗುವುದಿಲ್ಲ .

ಭಾರತೀಯ ಋಷಿಮುನಿಗಳ ಸನಾತನ ಧರ್ಮ ಸದಾ ಶಾಂತಿ ಮಂತ್ರವನ್ನೇ ಬೋಧಿಸುತ್ತಾ ಇರುತ್ತದೆ ಬ್ರಹ್ಮಶ್ರೀ ನಾರಾಯಣ ಗುರುಗಳು ಕೂಡ ಇದನ್ನೇ ನಿರಂತರ ಬೋಧಿಸುತ್ತಾ ಇದ್ದರು ಬುದ್ದ ಬಸವಣ್ಣರು ಶಾಂತಿ ಮಂತ್ರಗಳನ್ನೇ ಬೋಧಿಸಿದರು ಇಂತಹ ಘಟನೆ ಇದು ಒಂದಲ್ಲ ಈ ಮೊದಲು ಅನೇಕ ನಡೆದಿದೆ ಇಂದಿನ ವಿಕೃತ ಮನಸ್ಸಿನ ಮತಾಂದ ಯುವಕರಿಗೆ ಯಾವುದು ಸರಿ ಯಾವುದು ತಪ್ಪು ಎಂದು ಗೊತ್ತಾಗುವುದಿಲ್ಲ ಇದಕ್ಕೆ ಸರಕಾರಗಳು ಅದು ಯಾವುದೇ ಪಕ್ಷದ ಸರ್ಕಾರ ಇರಲಿ ಯಾವುದೇ ಸಂದರ್ಭವಿರಲಿ ಯಾವುದೇ ಮತ ಪಂಥದ ವ್ಯಕ್ತಿಗಳು ತಪ್ಪು ಮಾಡಿದಾಗ ನಿಷ್ಕಾರುಣ್ಯವಾಗಿ ಕಠಿನವಾದ ಶಿಕ್ಷೆಯನ್ನು ವಿಧಿಸಿದಾಗ ಇಂತಹ ದುಷ್ಕೃತ್ಯಗಳು ನಡೆಯೋದಿಲ್ಲ ಈ ಪೈಶಾಚಿಕ ಘಟನೆ ನಮಗೆ ತುಂಬಾ ನೋವು ಕೊಟ್ಟಿದೆ ಇಂಥ ಘಟನೆಗಳು ಮುಂದಿನ ದಿನಗಳಲ್ಲಿ ನಡೆಯದಿರಲೆಂದು ನನ್ನ ಸ್ವಾಮಿ ಶ್ರೀರಾಮಚಂದ್ರ ದೇವರಲ್ಲಿ ಪ್ರಾರ್ಥಿಸುತ್ತೇನೆ ,ಎಂದು ತಿಳಿಸಿದ್ದಾರೆ

error: