March 29, 2024

Bhavana Tv

Its Your Channel

ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳ 13ನೇ ಪಟ್ಟಾಭಿಷೇಕ ಮಹೋತ್ಸವ ಸೆ.3ಕ್ಕೆ

ಉಜಿರೆ:- ನಾಮಧಾರಿಗಳ ಕುಲಗುರು ಹಾಗೂ ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಉಜಿರೆಯ ಮಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಬಿಷೇಕ ವರ್ಧಂತಿ ಉತ್ಸವ ಸೆಪ್ಟಂಬರ 3 ಶನಿವಾರದಂದು ಧರ್ಮಸ್ಥಳದ ದೇವರಗುಡ್ಡ ಗುರುದೇವ ಮಠದಲ್ಲಿ ನಡೆಯಲಿದೆ.
ಗುರುದೇವ ಮಠದಲ್ಲಿ ಅಂದು ಬೆಳಗ್ಗೆ 10.30 ಗಂಟೆಯಿAದ ಪಟ್ಟಾಭಿಷೇಕ ಮಹೋತ್ಸವ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು, ಶ್ರೀಗಳ ಭವ್ಯ ಮೆರವಣಿಗೆ ಬಳಿಕ ಶ್ರೀಗಳ ಪಾದ ಪೂಜೆ ನಡೆಯಲಿದೆ. ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಹಿರಿಯ ಗುರುಗಳ ಪ್ರತಿಮೆಗಳಿಗೆ ಪೂಜೆ ಸಲ್ಲಿಸಲಾಗುವುದು. ಮಧ್ಯಾಹ್ನ ಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾಮಧಾರಿ ಕುಲ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಠಕ್ಕೆ ಆಗಮಿಸುವ ಮೂಲಕ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶ್ರೀರಾಮ ಸೇವಾ ಸಮಿತಿಯ ಎಲ್ಲಾ ಥಾಲೂಕು ಸಂಚಾಲಕರು ವಿನಂತಿಸಿದ್ದಾರೆ.

error: