April 23, 2024

Bhavana Tv

Its Your Channel

ಶ್ರೀ ಚಿತ್ರಾಪುರ ಮಠ,ಶಿರಾಲಿ ಪರಮಪೂಜ್ಯ ಗುರುಗಳ ಆಶೀರ್ವಾದದೊಂದಿಗೆ ದತ್ತ ಜಯಂತಿ

ಮoಗಳೂರು,; ಗೀತಾ ಜಯಂತಿ,ದತ್ತ ಜಯಂತಿ ಭಜನಾ ಕಾರ್ಯಕ್ರಮ,ಉತ್ಸವ, ಹಾಗೂ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ಪರಮ ಪೂಜ್ಯ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಮಠಾಧಿಪತಿ , ಶ್ರೀ ಚಿತ್ರಾಪುರ ಮಠ,ಶಿರಾಲಿ ಪರಮಪೂಜ್ಯ ಗುರುಗಳ ಆಶೀರ್ವಾದದೊಂದಿಗೆ ದಿನಾಂಕ ೧/೧೨/೨೦೨೨ರಿಂದ ೦೮/೧೨/೨೦೨೨ರ ತನಕ ದತ್ತ ಜಯಂತಿ ಭಜನಾ ಕಾರ್ಯಕ್ರಮ ನಡೆಯಿತು. ದಿನಾಂಕ ೮/೧೨/೨೦೨೨ರಂದು ರಾತ್ರಿ ಪಾಲಕಿ ಉತ್ಸವ ಮಂಗಳೂರು ರಥಬೀದಿ , ಕಾತ್ಯಾಯನಿ ಮಠ, ಗಣಪತಿ ದೇವಸ್ತಾನ ರಸ್ಥೆ, ರಾಮಮಂದಿರ, ಮಹಾಮಾಯಿ ದೇವಸ್ತಾನ ರಸ್ತೆ ಯಾಗಿ ಉಮಾಮಹೇಶ್ವರ್ ಪ್ರಸಾದ ಕಂಡ್ಲೂರ್ ಭವಾನಿಶಂಕರ್ ರವರ ಮನೆಯಲ್ಲಿ ದೇವರ ಪೂಜೆ , ಮಂಗಳಾರತಿ, ಕಟ್ಟೆ ಪೂಜೆ ಮುಗಿಸಿ ನಂತರ ದೇವರ ಸನ್ನಿಧಾನಕ್ಕೆ ಬಂದು ಅಷ್ಟಾವಧಾನ ಸೇವೆ ವಸಂತ ಮಂಟಪದಲ್ಲಿ ನಂತರ ಮಹಾಪೂಜೆ ಮಂಗಳಾರತಿ ವಿಜೃಂಭಣೆಯಿoದ ನಡೆಯಿತು .ದೇವಸ್ಥಾನದ ಟ್ರಸ್ಟೀಸ್ ಅರ್ಚಕರು,ಕಮಿಟಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು ಭಜಕ ವೃಂದದವರು ಸ್ಥಳೀಯರು ಸಾರಸ್ವತ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ದತ್ತಾತ್ರೇಯ ದೇವರ ಪ್ರಸಾದ ಸ್ವೀಕರಿಸಿದರು.

error: