April 19, 2024

Bhavana Tv

Its Your Channel

ಗಾಂಜಾ ಮಾರಾಟ ಯತ್ನ; ನೇಪಾಳದ ಯುವಕನ ಸಹಿತ ಇಬ್ಬರು ಆರೋಪಿಗಳ ಬಂಧನ

ಬಂಟ್ವಾಳ: ಗಾಂಜಾ ಮಾರಾಟ ಮಾಡಲು ಯತ್ನ ನಡೆಸುತ್ತಿದ್ದ ನೇಪಾಳದ ಯುವಕನ ಸಹಿತ ಇಬ್ಬರು ಆರೋಪಿಗಳನ್ನು ಡಿ.ಸಿ.ಐ.ಬಿ ಪೊಲೀಸ್‌ ನಿರೀಕ್ಷಕರಾದ ಚೆಲುವರಾಜು ಬಿ . ನೇತ್ರತ್ವದಲ್ಲಿ ಬಂಧನ.

ಅನ್ಸಾರಿ ಕ್ರಾಸ್ ರೋಡ್‌, ಬಂದರು ಮಂಗಳೂರು ನಿವಾಸಿ ಟಿ.ಪಿ ಅಜೀಜ್‌ ಅವರ ಮಗ ಟಿ.ಪಿ ಫಾರೂಕ್‌(50), ಹಾಗೂ ರಾಜ್‌ಪುರ್‌ ಗಬೀಸಾ ವಿಡಿಸಿ, ಜಿಲ್ಲೆ;ದಾಂಗ್‌, ಜೋನ್‌; ರಪ್ತಿ, ನೇಪಾಳ ನಿವಾಸಿ ಪ್ರೇಮ್‌ ಸಿಂಗ್‌ ಅವರ ಮಗ ಸಾಗರ್‌ ಸಿಂಗ್‌(22), ಬಂಧಿತ ಆರೋಪಿಗಳು. ಬಂಧಿತರಿಂದ 10,32,900/- ಮೌಲ್ಯದ ಒಟ್ಟು 1.480 ಕಿ.ಗ್ರಾಂ ಗಾಂಜಾವನ್ನು ಮತ್ತು ಅದನ್ನು ಸಾಗಾಟ ಮಾಡಲು ಉಪಯೋಗಿಸಿದ ಮಾರುತಿ ಬ್ರೀಝಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಬಿಳಿ ಬಣ್ಣದ ಬ್ರೀಝಾ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಗಾಂಜಾ ಬಿ.ಸಿ ರೋಡ್‌ನಿಂದ ಮಾಣಿ ಮಾರ್ಗದಲ್ಲಿ ಗಿರಾಕಿಗಳಿಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಪೊಲೀಸ್‍ ನಿರೀಕ್ಷಕ ಚೆಲುವರಾಜು ಸಿಬ್ಬಂದಿಯೊಂದಿಗೆ ಮೆಲ್ಕಾರ್‍ ಬಸ್ಸುನಿಲ್ದಾಣದ ಬಳಿ ಕಾದು ಬ್ರೀಜಾ ಕಾರನ್ನು ತಡೆದು ಅದರಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಹಿಡಿದು ವಿಚಾರಿಸಿದಾಗ ಮಂಗಳೂರು ನಿವಾಸಿ
ಟಿ.ಪಿ ಫಾರೂಕ್‌(50), ಹಾಗೂ ನೇಪಾಳ ಮೂಲದ ಪ್ರಸ್ತುತ ಪಿವಿಸ್‌ ಸರ್ಕಲ್, ಮಾನಸ ಟವರ್‌ ಎದುರುಗಡೆ, ಮಂಗಳೂರು ಪಿಜಿಯಲ್ಲಿ ವಾಸ ಮಾಡುವ ಸಾಗರ್‌ ಸಿಂಗ್‌(22) ಎಂದು ತಿಳಿಸಿದ್ದು ಇವರಿಬ್ಬರು ಗಾಂಜಾ ಮಾರಾಟ ಮಾಡಲು ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ .

ದಸ್ತಗಿರಿ ಮಾಡಿದ ಆರೋಪಿಗಳನ್ನು ಮತ್ತು ಸೊತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಬಂಟ್ವಾಳ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ. ಈ ಕಾರ್ಯಾಚರಣೆಯನ್ನು ಡಿ.ಸಿ.ಐ.ಬಿ ಪೊಲೀಸ್‍ ನಿರೀಕ್ಷರಾದ ಶ್ರೀ ಚೆಲುವರಾಜು ಬಿ ರವರ ನೇತ್ರತ್ವದಲ್ಲಿ ಡಿ.ಸಿ.ಐ.ಬಿ ಸಿಬ್ಬಂದಿಗಳಾದ ಲಕ್ಷ್ಮಣ ಕೆ.ಜಿ, ಉದಯ ರೈ, ಪ್ರವೀಣ್‍ ಎಂ, ತಾರಾನಾಥ್‍, ಪ್ರವೀಣ್‍ ರೈ, ಶೋನ್‍ಶಾ, ಸುರೇಶ್‍ ರವರು ನಡೆಸಿರುತ್ತಾರೆ ಹಾಗೂ ತಾಂತ್ರಿಕ ವಿಭಾಗದ ಸಂಪತ್‍ ಮತ್ತು ದಿವಾಕರ್ ಸಹಕರಿಸಿರುತ್ತಾರೆ

error: