April 25, 2024

Bhavana Tv

Its Your Channel

ಬೋಟ್ ಮಗುಚಿ ಬಿದ್ದು ೬ ಮಂದಿ ಮೀನುಗಾರರು ನಾಪತ್ತೆ.

ಮಂಗಳೂರು:ಮೀನುಗಾರಿಕೆಗೆ ತೆರಳಿ ವಾಪಾಸಾಗುತ್ತಿದ್ದ ಬೋಟ್ ಮಗುಚಿಬಿದ್ದು ೬ ಮಂದಿ ಮೀನುಗಾರರು ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬೋಳಾರದ ಶ್ರೀರಕ್ಷಾ ದುರಂತಕ್ಕೀಡಾದ ಬೋಟ್ ಎನ್ನಲಾಗಿದೆ. ಮಂಗಳೂರು ಮೀನುಗಾರಿಕಾ ಬಂದರಿನಿAದ ಅಳ ಸಮುದ್ರದ ಮೀನುಗಾರಿಕೆಗೆ ಸೋಮವಾರ (ನ.೩೦) ತೆರಳಿದ್ದ ಬೋಟ್, ಮೀನು ತುಂಬಿಸಿಕೊAಡು ಹಿಂತಿರುಗುತ್ತಿದ್ದಾಗ ಮಗುಚಿ ಬಿದ್ದಿದೆ. ದೋಣಿಯಲ್ಲಿ ೨೦ ಕ್ಕೂ ಹೆಚ್ಚು ಮೀನುಗಾರರಿದ್ದು, ದುರಂತದ ಸಂದರ್ಭದಲ್ಲಿ ೧೬ ಮಂದಿ ಡಿಂಗಿಯಲ್ಲಿ ಕುಳಿತು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ೬ ಮಂದಿ ನಾಪತ್ತೆಯಾಗಿದ್ದು, ಸ್ತಳಕ್ಕೆ ಕರಾವಳಿ ರಕ್ಷಣಾ ಪಡೆ ರಕ್ಷಣೆಗೆ ಧಾವಿಸಿದೆ.

error: